<p><strong>ಚಳ್ಳಕೆರೆ:</strong> ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಶನಿವಾರ ನಸುಕಿನಲ್ಲಿ ಮಾಳಿಗೆ ಮನೆ ಚಾವಣಿ ಕುಸಿದು ತಾಯಿ ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದಾರೆ.</p>.<p>ಗಂಭೀರವಾಗಿ ಗಾಯಗೊಂಡ ತಂದೆ ಚಂದ್ರಶೇಖರ ಹಾಗೂ ಅವರ ಅಣ್ಣನ ಮಗಳು ದೇವಿಕಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p>.<p>ತಾಯಿ ನಾಗರತ್ನಾ (32), ಮಕ್ಕಳಾದ ಯಶ್ವಿನಿ (5), ತೀರ್ಥವರ್ಧನ (3), ಕೋಮಲ (2) ಮೃತಪಟ್ಟವರು.</p>.<p>ಮರದ ತೊಲೆ ಹಾಗೂ ಜಂತಿ ಮಟ್ಟುಗಳನ್ನು ಬಳಸಿ ಮನೆಯ ಚಾವಣಿಗೆ ಕಡಪ ಕಲ್ಲು ಹಾಕಿಸಲಾಗಿತ್ತು. ಮನೆಯ ಒಳಗೆ ಮೂರು ಕಡೆ ಸರ್ವೆ ಪೋಲ್ಸ್ಗಳನ್ನು ಆಧಾರವಾಗಿ ನಿಲ್ಲಿಸಲಾಗಿತ್ತು. 30 ವರ್ಷ ಹಳೆಯದಾದ ಈ ಮನೆಯ ತೊಲೆ ಮತ್ತು ಜಂತಿಗೆ ಹುಳು ಹಿಡಿದಿದ್ದವು. ಇದರಿಂದ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ:</strong> ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಶನಿವಾರ ನಸುಕಿನಲ್ಲಿ ಮಾಳಿಗೆ ಮನೆ ಚಾವಣಿ ಕುಸಿದು ತಾಯಿ ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದಾರೆ.</p>.<p>ಗಂಭೀರವಾಗಿ ಗಾಯಗೊಂಡ ತಂದೆ ಚಂದ್ರಶೇಖರ ಹಾಗೂ ಅವರ ಅಣ್ಣನ ಮಗಳು ದೇವಿಕಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p>.<p>ತಾಯಿ ನಾಗರತ್ನಾ (32), ಮಕ್ಕಳಾದ ಯಶ್ವಿನಿ (5), ತೀರ್ಥವರ್ಧನ (3), ಕೋಮಲ (2) ಮೃತಪಟ್ಟವರು.</p>.<p>ಮರದ ತೊಲೆ ಹಾಗೂ ಜಂತಿ ಮಟ್ಟುಗಳನ್ನು ಬಳಸಿ ಮನೆಯ ಚಾವಣಿಗೆ ಕಡಪ ಕಲ್ಲು ಹಾಕಿಸಲಾಗಿತ್ತು. ಮನೆಯ ಒಳಗೆ ಮೂರು ಕಡೆ ಸರ್ವೆ ಪೋಲ್ಸ್ಗಳನ್ನು ಆಧಾರವಾಗಿ ನಿಲ್ಲಿಸಲಾಗಿತ್ತು. 30 ವರ್ಷ ಹಳೆಯದಾದ ಈ ಮನೆಯ ತೊಲೆ ಮತ್ತು ಜಂತಿಗೆ ಹುಳು ಹಿಡಿದಿದ್ದವು. ಇದರಿಂದ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>