ಗೌರಿ ಹತ್ಯೆ ಸಂಬಂಧ ಮೊದಲ ಆರೋಪಿಯನ್ನು ಎಸ್ಐಟಿ ಪೊಲೀಸರು ಬಂಧಿಸುತ್ತಿದ್ದಂತೆ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅದೇ ವೇಳೆ ವಾದ ಮಂಡಿಸಲೆಂದು ವಡವಡಗಿ ಅವರನ್ನು ಎಸ್ಪಿಪಿಯಾಗಿ ನೇಮಕ ಮಾಡಲಾಗಿತ್ತು. ಆದರೆ, ಅವರು ನ್ಯಾಯಾಲಯದ ಕಾರ್ಯಕಲಾಪಕ್ಕೆ ಪದೇ ಪದೇ ಗೈರಾಗುತ್ತಿದ್ದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಗೌರಿ ಲಂಕೇಶ್ ಅವರ ಆಪ್ತರು, ಎಸ್ಪಿಪಿ ಬದಲಾವಣೆ ಮಾಡುವಂತೆ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು.