<p><strong>ಕೊಪ್ಪಳ:</strong> ಐತಿಹಾಸಿಕ ಇಲ್ಲಿನ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವಕ್ಕೆ ಸಿದ್ಧತಾ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದ್ದು ಜನವರಿ 15ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ.</p><p>ಜ. 11ರಂದು ಸಂಜೆ 5 ಗಂಟೆಗೆ ಬಸವಪಟ, 12ರಂದು ಸಂಜೆ 5 ಗಂಟೆಗೆ ಗವಿಮಠದ ಆವರಣದಲ್ಲಿರುವ ಕೆರೆಯಲ್ಲಿ ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ, 13ರಂದು ಸಂಜೆ 5ಕ್ಕೆ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಕಳಸ ಮೆರವಣಿಗೆ ನಡೆಯಲಿವೆ.</p><p>14ರಂದು ಸಂಜೆ 5 ಗಂಟೆಗೆ ಕೈಲಾಸ ಮಂಟಪದಲ್ಲಿನ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವುದು, ಬಳಿಕ ಲಘು ರಥೋತ್ಸವ ಆಯೋಜನೆಯಾಗಿದೆ. 15ರಂದು ಮಹಾರಥೋತ್ಸವದ ಬಳಿಕ ಸಂಜೆ 6 ಗಂಟೆಗೆ ಕೈಲಾಸ ಮಂಟಪದಲ್ಲಿ ಧಾರ್ಮಿಕ ಗೋಷ್ಠಿ, ಅನುಭಾವಿಗಳ ಅಮೃತ ಚಿಂತನ ಗೋಷ್ಠಿಗಳು ಮೂರು ದಿನಗಳ ಕಾಲ ಜರುಗಲಿವೆ.</p><p>16ರಂದು ಸಂಜೆ 5ಕ್ಕೆ ಮಠದ ಆವರಣದಲ್ಲಿ ಬಳಗಾನೂರ ಶಿವಶಾಂತವೀರ ಶರಣರರಿಂದ ದೀರ್ಘದಿಂಡ ನಮಸ್ಕಾರ ಮತ್ತು ಮದ್ದು ಸುಡಲಾಗುತ್ತದೆ. 17ರಂದು ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.</p><p>ರಥೋತ್ಸವ ಸಾಗುವ ಮೈದಾನ ಹಾಗೂ ಅಂಗಡಿ ಮುಂಗಟ್ಟುಗಳನ್ನು ಹಾಕುವ ಜಾತ್ರಾ ಆವರಣವನ್ನು ಸ್ವಚ್ಛಗೊಳಿಸುವ ಕೆಲಸ ಗುರುವಾರ ಆರಂಭಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ಐತಿಹಾಸಿಕ ಇಲ್ಲಿನ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವಕ್ಕೆ ಸಿದ್ಧತಾ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದ್ದು ಜನವರಿ 15ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ.</p><p>ಜ. 11ರಂದು ಸಂಜೆ 5 ಗಂಟೆಗೆ ಬಸವಪಟ, 12ರಂದು ಸಂಜೆ 5 ಗಂಟೆಗೆ ಗವಿಮಠದ ಆವರಣದಲ್ಲಿರುವ ಕೆರೆಯಲ್ಲಿ ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ, 13ರಂದು ಸಂಜೆ 5ಕ್ಕೆ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಕಳಸ ಮೆರವಣಿಗೆ ನಡೆಯಲಿವೆ.</p><p>14ರಂದು ಸಂಜೆ 5 ಗಂಟೆಗೆ ಕೈಲಾಸ ಮಂಟಪದಲ್ಲಿನ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವುದು, ಬಳಿಕ ಲಘು ರಥೋತ್ಸವ ಆಯೋಜನೆಯಾಗಿದೆ. 15ರಂದು ಮಹಾರಥೋತ್ಸವದ ಬಳಿಕ ಸಂಜೆ 6 ಗಂಟೆಗೆ ಕೈಲಾಸ ಮಂಟಪದಲ್ಲಿ ಧಾರ್ಮಿಕ ಗೋಷ್ಠಿ, ಅನುಭಾವಿಗಳ ಅಮೃತ ಚಿಂತನ ಗೋಷ್ಠಿಗಳು ಮೂರು ದಿನಗಳ ಕಾಲ ಜರುಗಲಿವೆ.</p><p>16ರಂದು ಸಂಜೆ 5ಕ್ಕೆ ಮಠದ ಆವರಣದಲ್ಲಿ ಬಳಗಾನೂರ ಶಿವಶಾಂತವೀರ ಶರಣರರಿಂದ ದೀರ್ಘದಿಂಡ ನಮಸ್ಕಾರ ಮತ್ತು ಮದ್ದು ಸುಡಲಾಗುತ್ತದೆ. 17ರಂದು ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.</p><p>ರಥೋತ್ಸವ ಸಾಗುವ ಮೈದಾನ ಹಾಗೂ ಅಂಗಡಿ ಮುಂಗಟ್ಟುಗಳನ್ನು ಹಾಕುವ ಜಾತ್ರಾ ಆವರಣವನ್ನು ಸ್ವಚ್ಛಗೊಳಿಸುವ ಕೆಲಸ ಗುರುವಾರ ಆರಂಭಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>