<p><strong>ಬೆಂಗಳೂರು:</strong> ‘ವಸಾಹತುಶಾಹಿಯ ಪಳೆಯುಳಿಕೆಯಂತಿರುವ ರಾಜ್ಯಪಾಲರ ಭಾಷಣವನ್ನು ವಾರ್ಷಿಕ ಪ್ರಕ್ರಿಯೆಯಾದ ಜಂಟಿ ಅಧಿವೇಶನದಲ್ಲಿ ಓದುವ ಕುರಿತು ಪುನರ್ ಪರಿಶೀಲನೆಯಾಗಬೇಕು. ಈ ಕುರಿತು ಚರ್ಚೆಯಾಗಬೇಕು’ ಎಂದು ಬಿಜೆಪಿಯ ಎಸ್. ಸುರೇಶ್ ಕುಮಾರ್ ಹೇಳಿದರು.</p>.<p>ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಮಾತನಾಡಿದ ಅವರು, ‘ಇದು ನನ್ನ ವೈಯಕ್ತಿಕ ಅಭಿಪ್ರಾಯ. ರಾಜ್ಯ ಸರ್ಕಾರ ಕೆಟ್ಟ ಆಡಳಿತ ನೀಡಿದ್ದರೂ ಅತ್ಯಂತ ಉತ್ತಮ ಸರ್ಕಾರ ಎಂದು ರಾಜ್ಯಪಾಲರ ಮೂಲಕ ಹೇಳಿಸುವ ಸಂಪ್ರದಾಯ ಕೊನೆಯಾಗಬೇಕು. ರಾಜ್ಯಪಾಲರಿಗೆ ಇಂತಹ ಸುಳ್ಳುಗಳನ್ನು ಹೇಳಲು ಇಷ್ಟವಿಲ್ಲದಿದ್ದರೂ ಸಿದ್ಧಪಡಿಸಿದ ಭಾಷಣ ಅವರಿಂದ ಮಾಡಿಸಬೇಕಾ ಎನ್ನುವ ಚರ್ಚೆಯ ಅಗತ್ಯವಿದೆ’ ಎಂದರು.</p>.<p>‘ನನ್ನ ಸರ್ಕಾರ ಎಂದು ಓದುವ ರಾಜ್ಯಪಾಲರ ಭಾಷಣವನ್ನು ಖಂಡಿಸುತ್ತೇನೆ. ಈ ವಿಚಾರದಲ್ಲಿ ಸಂವಿಧಾನದ ತಿದ್ದುಪಡಿಯಾಗಬೇಕೆಂದು ನೆರೆಯ ರಾಜ್ಯದ ಮುಖ್ಯಮಂತ್ರಿ ಹೇಳಿದ್ದಾರೆ. ನ್ಯಾ.ರಾಮಾಜೋಯಿಸ್ ಅವರು ರಾಜ್ಯಪಾಲರ ಭಾಷಣ ನಿಲ್ಲಿಸಬೇಕು ಎಂದಿದ್ದರು. ಸಂವಿಧಾನ ರಚಿಸುವಾಗ ಮುಂದೆ ಇಂತಹ ಸಂಘರ್ಷ ಬರಲಿದೆ ಅಂತ ಯಾರೂ ಭಾವಿಸಿರಲಿಲ್ಲ. ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣ ಓದಲಿಲ್ಲವೆಂದರೆ ಜಾಹೀರಾತು ಮೂಲಕ ಸರ್ಕಾರ ಎಲ್ಲವನ್ನೂ ಹೇಳುತ್ತದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು. ಕರ್ನಾಟಕದಿಂದಲೇ ಚರ್ಚೆ ಆರಂಭವಾಗಲಿ’ ಎಂದು ಸಲಹೆ ನೀಡಿದರು.</p>.<p>‘ರಾಜ್ಯಪಾಲರ ಕೈಯಲ್ಲಿ ನನ್ನ ಸರ್ಕಾರ ಅಂತ ಭಾಷಣ ಮಾಡಿಸಿದರೆ ಸಾಲದು, ಹೊರಗಿನ ಜನರೂ ನನ್ನ ಸರ್ಕಾರ ಅಂತ ಅಲೋಚಿಸುವಂತಾಗಬೇಕು. ಹಾಗಾಗಿ, ನಾವು ರಾಜ್ಯಪಾಲರಿಗೆ ವಂದನೆ ಸಲ್ಲಿಸುತ್ತೇವೆ. ಅವರ ಭಾಷಣಕ್ಕಲ್ಲ’ ಎಂದರು.</p>.<p><strong>ಬೆಲೆ ಏರಿಕೆ ಬಿಜೆಪಿ–ಕಾಂಗ್ರೆಸ್ ವಾಗ್ವಾದ</strong></p><p>‘ರಾಜ್ಯ ಸರ್ಕಾರ ಪ್ರತಿ ಸಾಮಗ್ರಿಯ ಬೆಲೆ ಏರಿಕೆ ಮಾಡಿದೆ. ಮರಣಪ್ರಮಾಣ ಪತ್ರ ಸೇರಿದಂತೆ ಎಲ್ಲ ಸೇವೆಗಳ ಶುಲ್ಕವನ್ನೂ ಏರಿಸಿದೆ’ ಎಂದ ಸುರೇಶ್ಕುಮಾರ್ ಅವರು, ಒಂದೊಂದೆ ದರ ಪಟ್ಟಿ ಓದುತ್ತಿದ್ದಂತೆ ‘ಏರಿಕೆ ಆಗಿದೆ, ಆಗಿದೆ’ ಎಂದು ಬಿಜೆಪಿ–ಜೆಡಿಎಸ್ ಸದಸ್ಯರು ಧ್ವನಿಗೂಡಿಸಿದರು.</p><p>ಆಗ ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ ‘ಪೆಟ್ರೋಲ್–ಡೀಸೆಲ್ ಮೇಲಿನ ಬೆಲೆ ಏರಿಕೆಯ ಬಗ್ಗೆಯೂ ಪ್ರಸ್ತಾಪಿಸ ಬೇಕು. ಕೇಂದ್ರ ಸರ್ಕಾರವೇ ಎಲ್ಲ ವಸ್ತುಗಳ ದರ ನಿರ್ಧಾರ ಮಾಡುತ್ತದೆ. ಬಿಜೆಪಿ ಆಡಳಿತದಲ್ಲಿ ದರ ಏರಿಕೆ ಗಗನಕ್ಕೇರಿದೆ’ ಎಂದರು. ಅದಕ್ಕೆ ಧ್ವನಿಗೂಡಿಸಿದ ಸಚಿವ ರಾಮಲಿಂಗಾರೆಡ್ಡಿ, ‘ನೀರು, ಗಾಳಿ ಎರಡಕ್ಕೆ ಮಾತ್ರ ಜಿಎಸ್ಟಿ ಹಾಕಿಲ್ಲ’ ಎಂದು ಕುಟುಕಿದರು. ಅದಕ್ಕೆ ಬಿಜೆಪಿಯ ಸುನೀಲ್ಕುಮಾರ್, ದೊಡ್ಡನಗೌಡ ಪಾಟೀಲ ಅವರು, ‘ಪ್ರಿಯಾಂಕ್ ವಿಶ್ವಮಾನವರು. ಅವರು ದೇಶದ ಬಗ್ಗೆ ಚರ್ಚೆ ಮಾಡಲು ಪಾರ್ಲಿಮೆಂಟ್ಗೆ ಹೋಗಲಿ’ ಎಂದು ಕಾಲೆಳೆದರು.‘ರಾಜ್ಯ ಸರ್ಕಾರ ಪ್ರತಿ ಸಾಮಗ್ರಿಯ ಬೆಲೆ ಏರಿಕೆ ಮಾಡಿದೆ. ಮರಣಪ್ರಮಾಣ ಪತ್ರ ಸೇರಿದಂತೆ ಎಲ್ಲ ಸೇವೆಗಳ ಶುಲ್ಕವನ್ನೂ ಏರಿಸಿದೆ’ ಎಂದ ಸುರೇಶ್ಕುಮಾರ್ ಅವರು, ಒಂದೊಂದೆ ದರ ಪಟ್ಟಿ ಓದುತ್ತಿದ್ದಂತೆ ‘ಏರಿಕೆ ಆಗಿದೆ, ಆಗಿದೆ’ ಎಂದು ಬಿಜೆಪಿ–ಜೆಡಿಎಸ್ ಸದಸ್ಯರು ಧ್ವನಿಗೂಡಿಸಿದರು.</p><p>ಆಗ ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ ‘ಪೆಟ್ರೋಲ್–ಡೀಸೆಲ್ ಮೇಲಿನ ಬೆಲೆ ಏರಿಕೆಯ ಬಗ್ಗೆಯೂ ಪ್ರಸ್ತಾಪಿಸ ಬೇಕು. ಕೇಂದ್ರ ಸರ್ಕಾರವೇ ಎಲ್ಲ ವಸ್ತುಗಳ ದರ ನಿರ್ಧಾರ ಮಾಡುತ್ತದೆ. ಬಿಜೆಪಿ ಆಡಳಿತದಲ್ಲಿ ದರ ಏರಿಕೆ ಗಗನಕ್ಕೇರಿದೆ’ ಎಂದರು. ಅದಕ್ಕೆ ಧ್ವನಿಗೂಡಿಸಿದ ಸಚಿವ ರಾಮಲಿಂಗಾರೆಡ್ಡಿ, ‘ನೀರು, ಗಾಳಿ ಎರಡಕ್ಕೆ ಮಾತ್ರ ಜಿಎಸ್ಟಿ ಹಾಕಿಲ್ಲ’ ಎಂದು ಕುಟುಕಿದರು. ಅದಕ್ಕೆ ಬಿಜೆಪಿಯ ಸುನೀಲ್ಕುಮಾರ್, ದೊಡ್ಡನಗೌಡ ಪಾಟೀಲ ಅವರು, ‘ಪ್ರಿಯಾಂಕ್ ವಿಶ್ವಮಾನವರು. ಅವರು ದೇಶದ ಬಗ್ಗೆ ಚರ್ಚೆ ಮಾಡಲು ಪಾರ್ಲಿಮೆಂಟ್ಗೆ ಹೋಗಲಿ’ ಎಂದು ಕಾಲೆಳೆದರು.</p>.<p><strong>ಕಾಂಗ್ರೆಸ್ ಸ್ಥಿತಿಯ ಚರ್ಚೆ ಮಾಡಲಿ: ವಿಜಯೇಂದ್ರ</strong></p><p>ಲೋಕಸಭೆಯಲ್ಲಿ 415 ಸಂಸದರನ್ನು ಹೊಂದಿದ್ದ ಕಾಂಗ್ರೆಸ್ 2024ರ ಲೋಕಸಭಾ ಚುನಾವಣೆಯಲ್ಲಿ ಕೇವಲ 99 ಸ್ಥಾನಗಳಿಗೆ ತೃಪ್ತಿ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಹೀನಾಯ ಪರಿಸ್ಥಿತಿ ಕುರಿತು ಆ ಪಕ್ಷ ಒಂದು ಕ್ಷಣ ಯೋಚಿಸಬೇಕು ಎಂದು ಬಿಜೆಪಿಯ ಬಿ.ವೈ.ವಿಜಯೇಂದ್ರ ಹೇಳಿದರು.</p><p>ರಾಜ್ಯದಿಂದ ಜಿಎಸ್ಟಿ ತೆರಿಗೆ ಮೂಲಕ ಕೇಂದ್ರಕ್ಕೆ ಎಷ್ಟು ಮೊತ್ತ ಹೋಗಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ. ಯುಪಿಎ ಸರ್ಕಾರದ ಅವಧಿ ಮತ್ತು ಎನ್ಡಿಎ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿದ ಮೊತ್ತದ ಕುರಿತು ಚರ್ಚೆಯಾಗಬೇಕು ಎಂದರು. 2014ರಿಂದ 2025ರ ಅವಧಿಯಲ್ಲಿ ನರೇಂದ್ರ ಮೋದಿ ಹಾಗೂ ಕೇಂದ್ರದ ವಿರುದ್ಧ ಒಂದು ಭ್ರಷ್ಟಾಚಾರದ ಆರೋಪ ಮಾಡಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ ಎಂದು ಹೇಳಿದರು.</p><p>ತುಂಗಾಭದ್ರಾ ಮಂಡಳಿಯು ತುಂಗಾಭದ್ರಾ ಜಲಾಶಯದ ರೈತರ ಹಿತದೃಷ್ಟಿಯಿಂದ ಮೇ- 2026ರ ಒಳಗೆ ಹೊಸ ಕ್ರೆಸ್ಟ್ಗೇಟ್ಗಳ ಅಳವಡಿಕೆಗೆ ಕ್ರಮ ಕೈಗೊಂಡಿದ್ದರೂ ಕರ್ನಾಟಕ ಸರ್ಕಾರ ₹10 ಕೋಟಿ ಹಣ ತಡೆಹಿಡಿದಿರುವುದು ಆಘಾತಕಾರಿ ಸಂಗತಿ ಎಂದರು.</p>.<p><strong>ಜೆಪಿ ಭ್ರಷ್ಟಾಚಾರದಿಂದ ಕಾಂಗ್ರೆಸ್ಗೆ ಲಾಭ: ಯತ್ನಾಳ</strong></p><p>‘ಹಿಂದಿನ ಅವಧಿಯ ಬಿಜೆಪಿ ಭ್ರಷ್ಟಾಚಾರದಿಂದ ದೀರ್ಘಾವಧಿ ಆಡಳಿತ ನೀಡಲು ಸಾಧ್ಯವಾಗಲಿಲ್ಲ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.</p><p>ಬಿಜೆಪಿಯ ರಾಜ್ಯ ನಾಯಕರು ಮೋದಿ ಜಪ ಮಾಡಿದರೆ ಸಾಲದು ಅದೇ ರೀತಿ ಆಡಳಿತ ನೀಡಬೇಕಿತ್ತು. ನರೇಂದ್ರ ಮೋದಿ ಅವರ ಆಡಳಿತ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಬಿಜೆಪಿ ವಿಫಲವಾಯಿತು. 40 ಪರ್ಸೆಂಟ್ ಕಮಿಷನ್ ಎನ್ನುವ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಹೇಳಿಕೆಯನ್ನೇ ಬಳಸಿಕೊಂಡು ಕಾಂಗ್ರೆಸ್ ಚುನಾವಣಾ ಲಾಭ ಪಡೆಯಿತು ಎಂದರು. ನಾಗಮೋಹನ್ದಾಸ್ ಆಯೋಗದ ವರದಿ ಏನಾಯಿತು? ಈ ಸರ್ಕಾರದಲ್ಲಿ ಶೇ 100ರಷ್ಟು ಭ್ರಷ್ಟಾಚಾರ ಇದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಈಗಿನ ಸರ್ಕಾರದಲ್ಲೂ ಪರ್ಸೆಂಟೇಜ್ ನಡೆಯುತ್ತಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಬಿಜೆಪಿ ಏಕೆ ಹೋರಾಟ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ವಸಾಹತುಶಾಹಿಯ ಪಳೆಯುಳಿಕೆಯಂತಿರುವ ರಾಜ್ಯಪಾಲರ ಭಾಷಣವನ್ನು ವಾರ್ಷಿಕ ಪ್ರಕ್ರಿಯೆಯಾದ ಜಂಟಿ ಅಧಿವೇಶನದಲ್ಲಿ ಓದುವ ಕುರಿತು ಪುನರ್ ಪರಿಶೀಲನೆಯಾಗಬೇಕು. ಈ ಕುರಿತು ಚರ್ಚೆಯಾಗಬೇಕು’ ಎಂದು ಬಿಜೆಪಿಯ ಎಸ್. ಸುರೇಶ್ ಕುಮಾರ್ ಹೇಳಿದರು.</p>.<p>ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಮಾತನಾಡಿದ ಅವರು, ‘ಇದು ನನ್ನ ವೈಯಕ್ತಿಕ ಅಭಿಪ್ರಾಯ. ರಾಜ್ಯ ಸರ್ಕಾರ ಕೆಟ್ಟ ಆಡಳಿತ ನೀಡಿದ್ದರೂ ಅತ್ಯಂತ ಉತ್ತಮ ಸರ್ಕಾರ ಎಂದು ರಾಜ್ಯಪಾಲರ ಮೂಲಕ ಹೇಳಿಸುವ ಸಂಪ್ರದಾಯ ಕೊನೆಯಾಗಬೇಕು. ರಾಜ್ಯಪಾಲರಿಗೆ ಇಂತಹ ಸುಳ್ಳುಗಳನ್ನು ಹೇಳಲು ಇಷ್ಟವಿಲ್ಲದಿದ್ದರೂ ಸಿದ್ಧಪಡಿಸಿದ ಭಾಷಣ ಅವರಿಂದ ಮಾಡಿಸಬೇಕಾ ಎನ್ನುವ ಚರ್ಚೆಯ ಅಗತ್ಯವಿದೆ’ ಎಂದರು.</p>.<p>‘ನನ್ನ ಸರ್ಕಾರ ಎಂದು ಓದುವ ರಾಜ್ಯಪಾಲರ ಭಾಷಣವನ್ನು ಖಂಡಿಸುತ್ತೇನೆ. ಈ ವಿಚಾರದಲ್ಲಿ ಸಂವಿಧಾನದ ತಿದ್ದುಪಡಿಯಾಗಬೇಕೆಂದು ನೆರೆಯ ರಾಜ್ಯದ ಮುಖ್ಯಮಂತ್ರಿ ಹೇಳಿದ್ದಾರೆ. ನ್ಯಾ.ರಾಮಾಜೋಯಿಸ್ ಅವರು ರಾಜ್ಯಪಾಲರ ಭಾಷಣ ನಿಲ್ಲಿಸಬೇಕು ಎಂದಿದ್ದರು. ಸಂವಿಧಾನ ರಚಿಸುವಾಗ ಮುಂದೆ ಇಂತಹ ಸಂಘರ್ಷ ಬರಲಿದೆ ಅಂತ ಯಾರೂ ಭಾವಿಸಿರಲಿಲ್ಲ. ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣ ಓದಲಿಲ್ಲವೆಂದರೆ ಜಾಹೀರಾತು ಮೂಲಕ ಸರ್ಕಾರ ಎಲ್ಲವನ್ನೂ ಹೇಳುತ್ತದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು. ಕರ್ನಾಟಕದಿಂದಲೇ ಚರ್ಚೆ ಆರಂಭವಾಗಲಿ’ ಎಂದು ಸಲಹೆ ನೀಡಿದರು.</p>.<p>‘ರಾಜ್ಯಪಾಲರ ಕೈಯಲ್ಲಿ ನನ್ನ ಸರ್ಕಾರ ಅಂತ ಭಾಷಣ ಮಾಡಿಸಿದರೆ ಸಾಲದು, ಹೊರಗಿನ ಜನರೂ ನನ್ನ ಸರ್ಕಾರ ಅಂತ ಅಲೋಚಿಸುವಂತಾಗಬೇಕು. ಹಾಗಾಗಿ, ನಾವು ರಾಜ್ಯಪಾಲರಿಗೆ ವಂದನೆ ಸಲ್ಲಿಸುತ್ತೇವೆ. ಅವರ ಭಾಷಣಕ್ಕಲ್ಲ’ ಎಂದರು.</p>.<p><strong>ಬೆಲೆ ಏರಿಕೆ ಬಿಜೆಪಿ–ಕಾಂಗ್ರೆಸ್ ವಾಗ್ವಾದ</strong></p><p>‘ರಾಜ್ಯ ಸರ್ಕಾರ ಪ್ರತಿ ಸಾಮಗ್ರಿಯ ಬೆಲೆ ಏರಿಕೆ ಮಾಡಿದೆ. ಮರಣಪ್ರಮಾಣ ಪತ್ರ ಸೇರಿದಂತೆ ಎಲ್ಲ ಸೇವೆಗಳ ಶುಲ್ಕವನ್ನೂ ಏರಿಸಿದೆ’ ಎಂದ ಸುರೇಶ್ಕುಮಾರ್ ಅವರು, ಒಂದೊಂದೆ ದರ ಪಟ್ಟಿ ಓದುತ್ತಿದ್ದಂತೆ ‘ಏರಿಕೆ ಆಗಿದೆ, ಆಗಿದೆ’ ಎಂದು ಬಿಜೆಪಿ–ಜೆಡಿಎಸ್ ಸದಸ್ಯರು ಧ್ವನಿಗೂಡಿಸಿದರು.</p><p>ಆಗ ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ ‘ಪೆಟ್ರೋಲ್–ಡೀಸೆಲ್ ಮೇಲಿನ ಬೆಲೆ ಏರಿಕೆಯ ಬಗ್ಗೆಯೂ ಪ್ರಸ್ತಾಪಿಸ ಬೇಕು. ಕೇಂದ್ರ ಸರ್ಕಾರವೇ ಎಲ್ಲ ವಸ್ತುಗಳ ದರ ನಿರ್ಧಾರ ಮಾಡುತ್ತದೆ. ಬಿಜೆಪಿ ಆಡಳಿತದಲ್ಲಿ ದರ ಏರಿಕೆ ಗಗನಕ್ಕೇರಿದೆ’ ಎಂದರು. ಅದಕ್ಕೆ ಧ್ವನಿಗೂಡಿಸಿದ ಸಚಿವ ರಾಮಲಿಂಗಾರೆಡ್ಡಿ, ‘ನೀರು, ಗಾಳಿ ಎರಡಕ್ಕೆ ಮಾತ್ರ ಜಿಎಸ್ಟಿ ಹಾಕಿಲ್ಲ’ ಎಂದು ಕುಟುಕಿದರು. ಅದಕ್ಕೆ ಬಿಜೆಪಿಯ ಸುನೀಲ್ಕುಮಾರ್, ದೊಡ್ಡನಗೌಡ ಪಾಟೀಲ ಅವರು, ‘ಪ್ರಿಯಾಂಕ್ ವಿಶ್ವಮಾನವರು. ಅವರು ದೇಶದ ಬಗ್ಗೆ ಚರ್ಚೆ ಮಾಡಲು ಪಾರ್ಲಿಮೆಂಟ್ಗೆ ಹೋಗಲಿ’ ಎಂದು ಕಾಲೆಳೆದರು.‘ರಾಜ್ಯ ಸರ್ಕಾರ ಪ್ರತಿ ಸಾಮಗ್ರಿಯ ಬೆಲೆ ಏರಿಕೆ ಮಾಡಿದೆ. ಮರಣಪ್ರಮಾಣ ಪತ್ರ ಸೇರಿದಂತೆ ಎಲ್ಲ ಸೇವೆಗಳ ಶುಲ್ಕವನ್ನೂ ಏರಿಸಿದೆ’ ಎಂದ ಸುರೇಶ್ಕುಮಾರ್ ಅವರು, ಒಂದೊಂದೆ ದರ ಪಟ್ಟಿ ಓದುತ್ತಿದ್ದಂತೆ ‘ಏರಿಕೆ ಆಗಿದೆ, ಆಗಿದೆ’ ಎಂದು ಬಿಜೆಪಿ–ಜೆಡಿಎಸ್ ಸದಸ್ಯರು ಧ್ವನಿಗೂಡಿಸಿದರು.</p><p>ಆಗ ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ ‘ಪೆಟ್ರೋಲ್–ಡೀಸೆಲ್ ಮೇಲಿನ ಬೆಲೆ ಏರಿಕೆಯ ಬಗ್ಗೆಯೂ ಪ್ರಸ್ತಾಪಿಸ ಬೇಕು. ಕೇಂದ್ರ ಸರ್ಕಾರವೇ ಎಲ್ಲ ವಸ್ತುಗಳ ದರ ನಿರ್ಧಾರ ಮಾಡುತ್ತದೆ. ಬಿಜೆಪಿ ಆಡಳಿತದಲ್ಲಿ ದರ ಏರಿಕೆ ಗಗನಕ್ಕೇರಿದೆ’ ಎಂದರು. ಅದಕ್ಕೆ ಧ್ವನಿಗೂಡಿಸಿದ ಸಚಿವ ರಾಮಲಿಂಗಾರೆಡ್ಡಿ, ‘ನೀರು, ಗಾಳಿ ಎರಡಕ್ಕೆ ಮಾತ್ರ ಜಿಎಸ್ಟಿ ಹಾಕಿಲ್ಲ’ ಎಂದು ಕುಟುಕಿದರು. ಅದಕ್ಕೆ ಬಿಜೆಪಿಯ ಸುನೀಲ್ಕುಮಾರ್, ದೊಡ್ಡನಗೌಡ ಪಾಟೀಲ ಅವರು, ‘ಪ್ರಿಯಾಂಕ್ ವಿಶ್ವಮಾನವರು. ಅವರು ದೇಶದ ಬಗ್ಗೆ ಚರ್ಚೆ ಮಾಡಲು ಪಾರ್ಲಿಮೆಂಟ್ಗೆ ಹೋಗಲಿ’ ಎಂದು ಕಾಲೆಳೆದರು.</p>.<p><strong>ಕಾಂಗ್ರೆಸ್ ಸ್ಥಿತಿಯ ಚರ್ಚೆ ಮಾಡಲಿ: ವಿಜಯೇಂದ್ರ</strong></p><p>ಲೋಕಸಭೆಯಲ್ಲಿ 415 ಸಂಸದರನ್ನು ಹೊಂದಿದ್ದ ಕಾಂಗ್ರೆಸ್ 2024ರ ಲೋಕಸಭಾ ಚುನಾವಣೆಯಲ್ಲಿ ಕೇವಲ 99 ಸ್ಥಾನಗಳಿಗೆ ತೃಪ್ತಿ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಹೀನಾಯ ಪರಿಸ್ಥಿತಿ ಕುರಿತು ಆ ಪಕ್ಷ ಒಂದು ಕ್ಷಣ ಯೋಚಿಸಬೇಕು ಎಂದು ಬಿಜೆಪಿಯ ಬಿ.ವೈ.ವಿಜಯೇಂದ್ರ ಹೇಳಿದರು.</p><p>ರಾಜ್ಯದಿಂದ ಜಿಎಸ್ಟಿ ತೆರಿಗೆ ಮೂಲಕ ಕೇಂದ್ರಕ್ಕೆ ಎಷ್ಟು ಮೊತ್ತ ಹೋಗಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ. ಯುಪಿಎ ಸರ್ಕಾರದ ಅವಧಿ ಮತ್ತು ಎನ್ಡಿಎ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿದ ಮೊತ್ತದ ಕುರಿತು ಚರ್ಚೆಯಾಗಬೇಕು ಎಂದರು. 2014ರಿಂದ 2025ರ ಅವಧಿಯಲ್ಲಿ ನರೇಂದ್ರ ಮೋದಿ ಹಾಗೂ ಕೇಂದ್ರದ ವಿರುದ್ಧ ಒಂದು ಭ್ರಷ್ಟಾಚಾರದ ಆರೋಪ ಮಾಡಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ ಎಂದು ಹೇಳಿದರು.</p><p>ತುಂಗಾಭದ್ರಾ ಮಂಡಳಿಯು ತುಂಗಾಭದ್ರಾ ಜಲಾಶಯದ ರೈತರ ಹಿತದೃಷ್ಟಿಯಿಂದ ಮೇ- 2026ರ ಒಳಗೆ ಹೊಸ ಕ್ರೆಸ್ಟ್ಗೇಟ್ಗಳ ಅಳವಡಿಕೆಗೆ ಕ್ರಮ ಕೈಗೊಂಡಿದ್ದರೂ ಕರ್ನಾಟಕ ಸರ್ಕಾರ ₹10 ಕೋಟಿ ಹಣ ತಡೆಹಿಡಿದಿರುವುದು ಆಘಾತಕಾರಿ ಸಂಗತಿ ಎಂದರು.</p>.<p><strong>ಜೆಪಿ ಭ್ರಷ್ಟಾಚಾರದಿಂದ ಕಾಂಗ್ರೆಸ್ಗೆ ಲಾಭ: ಯತ್ನಾಳ</strong></p><p>‘ಹಿಂದಿನ ಅವಧಿಯ ಬಿಜೆಪಿ ಭ್ರಷ್ಟಾಚಾರದಿಂದ ದೀರ್ಘಾವಧಿ ಆಡಳಿತ ನೀಡಲು ಸಾಧ್ಯವಾಗಲಿಲ್ಲ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.</p><p>ಬಿಜೆಪಿಯ ರಾಜ್ಯ ನಾಯಕರು ಮೋದಿ ಜಪ ಮಾಡಿದರೆ ಸಾಲದು ಅದೇ ರೀತಿ ಆಡಳಿತ ನೀಡಬೇಕಿತ್ತು. ನರೇಂದ್ರ ಮೋದಿ ಅವರ ಆಡಳಿತ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಬಿಜೆಪಿ ವಿಫಲವಾಯಿತು. 40 ಪರ್ಸೆಂಟ್ ಕಮಿಷನ್ ಎನ್ನುವ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಹೇಳಿಕೆಯನ್ನೇ ಬಳಸಿಕೊಂಡು ಕಾಂಗ್ರೆಸ್ ಚುನಾವಣಾ ಲಾಭ ಪಡೆಯಿತು ಎಂದರು. ನಾಗಮೋಹನ್ದಾಸ್ ಆಯೋಗದ ವರದಿ ಏನಾಯಿತು? ಈ ಸರ್ಕಾರದಲ್ಲಿ ಶೇ 100ರಷ್ಟು ಭ್ರಷ್ಟಾಚಾರ ಇದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಈಗಿನ ಸರ್ಕಾರದಲ್ಲೂ ಪರ್ಸೆಂಟೇಜ್ ನಡೆಯುತ್ತಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಬಿಜೆಪಿ ಏಕೆ ಹೋರಾಟ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>