ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಳೆದ 6 ತಿಂಗಳಿನಿಂದಲೂ ಅವರು (ಬಿಜೆಪಿ) ಇದನ್ನೇ ಹೇಳಿಕೊಂಡು ಬರುತ್ತಿದ್ದಾರೆ. ಆದರೆ, ಸರ್ಕಾರ ಬಿದ್ದಿಲ್ಲ. ಯಾರೂ ರಾಜೀನಾಮೆ ಕೊಡಲ್ಲ. ಸಚಿವ ಸಂಪುಟ ವಿಸ್ತರಣೆಯಾದಾಗ ಕೆಲವರಿಗೆ ಅಸಮಾಧಾನ ಉಂಟಾಗುವುದು ಸ್ವಾಭಾವಿಕ. ಅಸಮಾಧಾನಗೊಂಡವರನ್ನು ಪಕ್ಷದ ವರಿಷ್ಠರು ಮಾತನಾಡಿಸಿ, ಸಮಾಧಾನ ಪಡಿಸುತ್ತಾರೆ’ ಎಂದು ಹೇಳಿದರು.