ಹಾಸನ: ಲೋಕೋಪಯೋಗಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಶನಿವಾರ ಹಾಸನದ ರಾಮನಾಥಪುರದ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ್ದರು.ಈ ವೇಳೆ ನಿರಾಶ್ರಿತರ ಸಮಸ್ಯೆ ಕೇಳುವ ಮುನ್ನವೇಬಿಸ್ಕೆಟ್ನ್ನು ಆ ಜನರತ್ತ ಎಸೆಯುತ್ತಿರುವ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಚಿವರು ತಮ್ಮ ಕಷ್ಟಗಳನ್ನು ಆಲಿಸಲು ಬಂದಿದ್ದಾರೆ ಎಂದು ಅಲ್ಲಿದ್ದ ನಿರಾಶ್ರಿತರು ಗುಂಪಾಗಿ ಮುತ್ತಿಕೊಂಡಿದ್ದರು.ಆ ಹೊತ್ತಿಗೆ ರೇವಣ್ಣ ತಾವು ತಂದಿದ್ದ ಬಿಸ್ಕೆಟ್ ಪ್ಯಾಕ್ ಬಿಚ್ಚಿ ಒಂದೊಂದೇ ಬಿಸ್ಕೆಟ್ನ್ನು ಅವರತ್ತ ಎಸೆದಿದ್ದಾರೆ.ಈ ದೃಶ್ಯಗಳು ಸುದ್ದಿವಾಹಿನಿಯಲ್ಲಿ ಪ್ರಸಾರವಾಗಿತ್ತು.
ಇದೇ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದ್ದು, ಜನರಿಂದ ಆಕ್ರೋಶ ವ್ಯಕ್ತವಾಗಿದೆ.