<p><strong>ಬೆಂಗಳೂರು:</strong> ಮಳೆ ಮತ್ತು ಪ್ರವಾಹದಿಂದ ನಲುಗಿರುವ ಹಿಮಾಚಲ ಪ್ರದೇಶ ರಾಜ್ಯದ ಪ್ರಕೃತಿ ವಿಕೋಪ ನಿಧಿಗೆ ಕರ್ನಾಟಕ ಸರ್ಕಾರ ₹5 ಕೋಟಿ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ದೂರದ ಹಿಮಾಚಲ ಪ್ರದೇಶದ ನೆರೆಗೆ ಮಿಡಿದು ₹5 ಕೋಟಿ ಪರಿಹಾರ ಘೋಷಿಸುವ ನಾಡವಿರೋಧಿ ಕಾಂಗ್ರೆಸ್ ಸರ್ಕಾರ, ರಾಜ್ಯದ ನೆರೆ ಸಂತ್ರಸ್ತರನ್ನು ನಡುನೀರಲ್ಲಿ ಕೈಬಿಟ್ಟು ದ್ರೋಹ ಬಗೆದಿದೆ ಎಂದು ಕಿಡಿಕಾರಿದೆ.</p>.<p>ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಇದು ನ್ಯಾಯವೇ ಸಿದ್ದರಾಮಯ್ಯ. ಕೇರಳ ಆನೆ ದುರಂತಕ್ಕೆ ₹15 ಲಕ್ಷ, ವಯನಾಡಿಗೆ ₹10 ಕೋಟಿ ಹಾಗೂ ದೂರದ ಹಿಮಾಚಲ ಪ್ರದೇಶದ ನೆರೆಗೆ ಮಿಡಿದು 5 ಕೋಟಿ ಪರಿಹಾರ ಘೋಷಿಸುವ ನಾಡವಿರೋಧಿ ಕಾಂಗ್ರೆಸ್ ಸರ್ಕಾರ, ರಾಜ್ಯದ ನೆರೆ ಸಂತ್ರಸ್ತರನ್ನು ನಡುನೀರಲ್ಲಿ ಕೈಬಿಟ್ಟು ದ್ರೋಹ ಬಗೆದಿದೆ. ಸಿದ್ದರಾಮಯ್ಯನವರೇ, ತಮ್ಮ ಮಾನವೀಯತೆ ಹೈಕಮಾಂಡ್ ಮೆಚ್ಚಿಸಲಾ? ಅಥವಾ ಕುರ್ಚಿ ಉಳಿಸಿಕೊಳ್ಳುವುದಕ್ಕಾ ಎಂದು ಪ್ರಶ್ನಿಸಿದೆ.</p>. <p>ಕೂಡಲೇ ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಿ ಹಾಗೇ ಹಾಸನದ ಅಮಾಯಕ ಮಕ್ಕಳ ಮೃತ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಿ ಎಂದೂ ಆಗ್ರಹಿಸಿದೆ.</p> .ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ ₹5 ಕೋಟಿ ನೆರವು: ಮುಖ್ಯಮಂತ್ರಿ ಸಿದ್ದರಾಮಯ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಳೆ ಮತ್ತು ಪ್ರವಾಹದಿಂದ ನಲುಗಿರುವ ಹಿಮಾಚಲ ಪ್ರದೇಶ ರಾಜ್ಯದ ಪ್ರಕೃತಿ ವಿಕೋಪ ನಿಧಿಗೆ ಕರ್ನಾಟಕ ಸರ್ಕಾರ ₹5 ಕೋಟಿ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ದೂರದ ಹಿಮಾಚಲ ಪ್ರದೇಶದ ನೆರೆಗೆ ಮಿಡಿದು ₹5 ಕೋಟಿ ಪರಿಹಾರ ಘೋಷಿಸುವ ನಾಡವಿರೋಧಿ ಕಾಂಗ್ರೆಸ್ ಸರ್ಕಾರ, ರಾಜ್ಯದ ನೆರೆ ಸಂತ್ರಸ್ತರನ್ನು ನಡುನೀರಲ್ಲಿ ಕೈಬಿಟ್ಟು ದ್ರೋಹ ಬಗೆದಿದೆ ಎಂದು ಕಿಡಿಕಾರಿದೆ.</p>.<p>ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಇದು ನ್ಯಾಯವೇ ಸಿದ್ದರಾಮಯ್ಯ. ಕೇರಳ ಆನೆ ದುರಂತಕ್ಕೆ ₹15 ಲಕ್ಷ, ವಯನಾಡಿಗೆ ₹10 ಕೋಟಿ ಹಾಗೂ ದೂರದ ಹಿಮಾಚಲ ಪ್ರದೇಶದ ನೆರೆಗೆ ಮಿಡಿದು 5 ಕೋಟಿ ಪರಿಹಾರ ಘೋಷಿಸುವ ನಾಡವಿರೋಧಿ ಕಾಂಗ್ರೆಸ್ ಸರ್ಕಾರ, ರಾಜ್ಯದ ನೆರೆ ಸಂತ್ರಸ್ತರನ್ನು ನಡುನೀರಲ್ಲಿ ಕೈಬಿಟ್ಟು ದ್ರೋಹ ಬಗೆದಿದೆ. ಸಿದ್ದರಾಮಯ್ಯನವರೇ, ತಮ್ಮ ಮಾನವೀಯತೆ ಹೈಕಮಾಂಡ್ ಮೆಚ್ಚಿಸಲಾ? ಅಥವಾ ಕುರ್ಚಿ ಉಳಿಸಿಕೊಳ್ಳುವುದಕ್ಕಾ ಎಂದು ಪ್ರಶ್ನಿಸಿದೆ.</p>. <p>ಕೂಡಲೇ ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಿ ಹಾಗೇ ಹಾಸನದ ಅಮಾಯಕ ಮಕ್ಕಳ ಮೃತ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಿ ಎಂದೂ ಆಗ್ರಹಿಸಿದೆ.</p> .ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ ₹5 ಕೋಟಿ ನೆರವು: ಮುಖ್ಯಮಂತ್ರಿ ಸಿದ್ದರಾಮಯ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>