ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Honey Trap | ಸಚಿವ ರಾಜಣ್ಣಗೆ ‘ಮಧುಬಲೆ’: ರಾಜಕೀಯ ಕಂಪನ

Published : 20 ಮಾರ್ಚ್ 2025, 23:30 IST
Last Updated : 20 ಮಾರ್ಚ್ 2025, 23:30 IST
ಫಾಲೋ ಮಾಡಿ
Comments
ಹನಿಟ್ರ್ಯಾಪ್ ವಿಷಯವಾಗಿ ಮಾಧ್ಯಮದ ಎದುರು ಮಾತನಾಡುವುದಲ್ಲ. ಅದರ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಿ. ಅದರ ಬಗ್ಗೆ ತನಿಖೆ ಮಾಡಿಸುತ್ತೇವೆ
ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ
ತನಿಖೆಯ ಭರವಸೆ ನೀಡಿದ ಸಿ.ಎಂ
ತಮ್ಮನ್ನು ಮಧುಬಲೆಗೆ ಕೆಡವುವ ಯತ್ನ ನಡೆದಿರುವ ಬಗ್ಗೆ ವಿಧಾನಸಭೆ ಯಲ್ಲಿ ಮಾತನಾಡಿದ ಬೆನ್ನಲ್ಲೆ ಕೆ.ಎನ್‌. ರಾಜಣ್ಣ ಅವರು ತಮ್ಮ ಮಗ, ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.
‘ಹನಿಟ್ರ್ಯಾಪ್ ಹಿಂದೆ ಡಿ.ಕೆ ತಂಡ’
‘ಡಿ.ಕೆ. ಶಿವಕುಮಾರ್ ಅವರ ಹನಿಟ್ರ್ಯಾಪ್‌ ತಂಡ ಈ ಕೆಲಸ ಮಾಡಿದೆ. ಸಿಬಿಐ ತನಿಖೆಗೆ ಕೊಡುವಂತೆ ನಾನು ಮನವಿ ಮಾಡಿದ್ದೇನೆ’ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ರಮೇಶ ಜಾರಕಿಹೊಳಿ, ಎಚ್‌.ಡಿ. ರೇವಣ್ಣ‌ ಅವರನ್ನು ಹನಿಟ್ರ್ಯಾಪ್‌ ಮಾಡಿದ್ದರು. ಈಗ ರಾಜಣ್ಣ ಮೇಲೆ ಮಾಡಿದ್ದಾರೆ’ ಎಂದರು.
‘ನ್ಯಾಯಾಧೀಶರಿಂದ ತನಿಖೆ ಮಾಡಿಸಿ’
‘ಹನಿಟ್ರ್ಯಾಪ್ ಗಂಭೀರ ವಿಚಾರ. ಬೇರೆಲ್ಲ ಪ್ರಕರಣಗಳಿಗೂ ಎಸ್ಐಟಿ ಮಾಡುತ್ತೀರಾ. ಈ ಪ್ರಕರಣ ಬಗ್ಗೆ ನೇರವಾಗಿ ಮಂತ್ರಿಗಳೇ ಹೇಳಿದ್ದಾರೆ. ಅವರಿಂದ ದೂರು ಪಡೆದು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಿ. ಇದರಿಂದ ಎಲ್ಲರಿಗೂ ನ್ಯಾಯ ಸಿಗಲಿದೆ’ ಎಂದು ವಿರೋಧ ಪಕ್ಷದ ನಾಯಕ ಅಶೋಕ ಆಗ್ರಹಿಸಿದರು. ‘ಸದನದಲ್ಲಿ ಮಂತ್ರಿಯೊಬ್ಬರು ಹನಿಟ್ರ್ಯಾಪ್ ಬಗ್ಗೆ ಮಾತನಾಡುತ್ತಾರೆಂದರೆ ನಾವು, ನೀವು ಗಂಭೀರವಾಗಿ ತೆಗೆದುಕೊಳ್ಳಬೇಕು. ಎಸ್ಐಟಿ ಮಾಡುತ್ತಿರೊ, ಯಾವ ತನಿಖೆ, ಯಾರ ನೇತೃತ್ವದಲ್ಲಿ ಮಾಡುತ್ತೀರೆಂದು ಸದನದಲ್ಲೇ ತಿಳಿಸಿ’ ಎಂದು ಗೃಹ ಸಚಿವರನ್ನು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT