ಕಾರ್ಯಕ್ರಮವನ್ನು ಸಾಹಿತಿ ಎಸ್. ಎಲ್ ಭೈರಪ್ಪ ಉದ್ಘಾಟಿಸಲಿದ್ದಾರೆ. ಕೇಂದ್ರ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷ ಚಂದ್ರಶೇಖರ ಕಂಬಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾದಂಬರಿ, ವಿಮರ್ಶೆ, ಕವಿಗೋಷ್ಠಿ, ನೆನಪಿನ ಚಿತ್ರಶಾಲೆ, ಸಾಹಿತ್ಯದ ಪೂರ್ವಾಪರ ಮುಂತಾದವುಗಳ ಬಗ್ಗೆ ಯಾವುದೇ ಇಸಂಗೆ ಒಳಪಡದೆ ಮುಕ್ತ ಚರ್ಚೆ ನಡೆಯಲಿದೆ’ ಎಂದು ಅವರು ವಿವರಿಸಿದರು.