'ಭಾನುವಾರ ಅರಣ್ಯದ ಕಚ್ಚಾ ರಸ್ತೆಯಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದರು. ಸಿಬ್ಬಂದಿ ತಡೆದು ವಿಚಾರಿಸಿದಾಗ ರೇಗಾಡಿದರು. ನಂತರ ಪೊಲೀಸರು ಹಾಗೂ ಇಲಾಖೆಯ ಅಧಿಕಾರಿಗಳು ಹೋದಾಗ ಸುಮ್ಮನಾದರು. ಅವರ ಬಳಿ ಪಾಸ್ ಪೋರ್ಟ್ ಸೇರಿದಂತೆ ಇನ್ನಿತರ ದಾಖಲೆಗಳು ಯಾವುದೂ ಇರಲಿಲ್ಲ. ಬೆಂಗಳೂರು ಬಿಟ್ಟು ಬೇರೆಲ್ಲೂ ಹೋಗುವುದಕ್ಕೆ ಅನುಮತಿಯನ್ನು ಅವರು ಹೊಂದಿಲ್ಲ. ಹಾಗಿದ್ದರೂ ಬಾಡಿಗೆ ಬೈಕ್ನಲ್ಲಿ ಬಂದಿದ್ದಾರೆ. ನಾವು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ. ಮುಂದಿನ ಕ್ರಮ ಅವರು ಕೈಗೊಳ್ಳುತ್ತಾರೆ' ಎಂದು ಬಾಲಚಂದ್ರ ತಿಳಿಸಿದರು.