‘ಬಾಂಗ್ಲಾ ವಲಸಿಗರು ಅಮಾಯಕರೆಂದು ವಾದಿಸಿದ್ದ ಕೆಲವು ಸಂಘಟನೆಗಳ ಸದಸ್ಯರು ನಮ್ಮ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು. ಹೀಗಾಗಿ, ಗಡಿಪಾರು ಪ್ರಕ್ರಿಯೆ ವಿಳಂಬವಾಯಿತು. ನಂತರ, 59 ಮಂದಿಯನ್ನು ನಾಲ್ಕು ತಂಡಗಳ ಮೂಲಕ ಗಡಿಪಾರು ಮಾಡಲಾಗಿದೆ. ಇನ್ನೊಂದು ತಂಡದಲ್ಲಿರುವ ವಲಸಿಗರು ಸದ್ಯ ಸೇನೆ ವಶದಲ್ಲಿದ್ದಾರೆ. ಅವರ ಗಡಿಪಾರು ಪ್ರಕ್ರಿಯೆ ಕೂಡಾ ಶ್ರೀಘ್ರ ಮುಕ್ತಾಯಗೊಳ್ಳಲಿದೆ’ ಎಂದರು.