ಪರಿಶಿಷ್ಟ ಸಮುದಾಯದ ವಿವಿಧ ಜಾತಿಗಳಿಗೆ ಪ್ರತ್ಯೇಕ ಮೀಸಲಾತಿ ನಿಗದಿ ಮಾಡಿದರೆ ಅದು ಜಾತಿಗಳ ನಡುವೆ ಕಚ್ಚಾಟಕ್ಕೆ ಕಾರಣವಾಗಬಹುದು ಎಂಬ ಕಳವಳವನ್ನು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ವ್ಯಕ್ತಪಡಿಸಿದ್ದಾರೆ. ಆದರೆ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇದಕ್ಕೆ ವ್ಯತಿರಿಕ್ತವಾದ ನಿಲುವು ಹೊಂದಿದ್ದಾರೆ. ಧ್ವನಿ ಇದ್ದವರಷ್ಟೇ ಸೌಲಭ್ಯ ಪಡೆದುಕೊಂಡರೆ ಜಾತಿಗಳ ನಡುವೆ ಕಂದಕ ನಿರ್ಮಾಣ ಆಗಬಹುದು. ಆ ಕಾರಣಕ್ಕೆ ಒಳಮೀಸಲಾತಿ ಅಗತ್ಯ ಎಂಬುದು ಅವರ ಪ್ರತಿಪಾದನೆ.