ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಕೆಪಿಎಸ್‌ಸಿ: ಅಧ್ಯಕ್ಷ, ಕಾರ್ಯದರ್ಶಿ ‘ಸಂಘರ್ಷ’ ತೀವ್ರ; ಸಿಎಸ್‌ಗೆ ಪತ್ರ

ರಾಜ್ಯಪಾಲರಿಂದ ತಿಳಿವಳಿಕೆ ಕೊಡಿಸಿ: ಸಿಎಸ್‌ಗೆ ಪತ್ರ
Published : 20 ಜನವರಿ 2024, 22:16 IST
Last Updated : 20 ಜನವರಿ 2024, 22:16 IST
ಫಾಲೋ ಮಾಡಿ
Comments
‘ಎಚ್‌ಎಲ್‌ಸಿಯಿಂದ ರಾಜೀನಾಮೆ ಪಡೆಯಲು ಕಾರಣವಾದ ₹ 12 ಲಕ್ಷ ವೆಚ್ಚ’
‘ಕಾನೂನು ಕೋಶದ ಮುಖ್ಯಸ್ಥರಾಗಿದ್ದ (ಎಚ್‌ಎಲ್‌ಸಿ) ಎಸ್‌.ಎಚ್‌. ಹೊಸಗೌಡರ್‌ ಅವರ ಅವಧಿ 2024ರ ಅ. 23ರವರೆಗೂ ಇತ್ತು. ಆದರೆ, ಕೋರ್ಟ್‌ನಲ್ಲಿರುವ ಆಯೋಗದ ಅಧ್ಯಕ್ಷರ ವೈಯಕ್ತಿಕ ಪ್ರಕರಣದಲ್ಲಿ ವಕೀಲರಿಗೆ ಪಾವತಿಸಬೇಕಿದ್ದ ಸಂಭಾವನೆ ₹ 12 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಆಯೋಗದಿಂದ ಪಾವತಿಸಬೇಕೆಂದು ಅಭಿಪ್ರಾಯ ನೀಡಲು ನಿರಾಕರಿಸಿದ್ದ ಹೊಸಗೌಡರ್‌, ‘ನ್ಯಾಯಾಲಯದ ಪ್ರಕರಣ ವೈಯಕ್ತಿಕವಾಗಿದ್ದು, ಸ್ವಂತ ವೆಚ್ಚದಿಂದ ಭರಿಸಬೇಕು’ ಎಂದು ಅಭಿಪ್ರಾಯ ನೀಡಿದ್ದರು. ಈ ಕಾರಣಕ್ಕೆ ಹೊಸಗೌಡರ್‌ ಮೇಲೆ ಒತ್ತಡ ಹೇರಿ ಬಲವಂತವಾಗಿ ರಾಜೀನಾಮೆ ಪತ್ರ ಪಡೆಯಲಾಗಿದೆ. ಅಲ್ಲದೆ, ಹೊಸಗೌಡರ್‌ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಕಾರ್ಯದರ್ಶಿಗೆ ಸೂಚಿಸಿ, ಈ ವಿಷಯವನ್ನು ಆಯೋಗದ ಸಭೆಗೆ ಮಂಡಿಸಲು ಸೂಚಿಸಲಾಗಿದೆ. ಕಾನೂನು ಕೋಶದ ಮುಖ್ಯಸ್ಥರು ಯಾವುದೇ ಒತ್ತಡಕ್ಕೆ ಮಣಿಯದೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಧ್ಯಕ್ಷರು ಮತ್ತು ಸದಸ್ಯರು ಅವಕಾಶ ನೀಡದಿರುವುದು ಈ ಹಿಂದೆಯೂ ನಡೆದಿದೆ’ ಎಂಬುದಾಗಿ ಪತ್ರದಲ್ಲಿ ಕಾರ್ಯದರ್ಶಿ ವಿವರಿಸಿದ್ದಾರೆ ಎಂದೂ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT