<p><strong>ಬಳ್ಳಾರಿ:</strong>‘ಉಫ್ ಅಂದ್ರೆ ಯಾರೋ ಹಾರೋಗ್ತಾರೆ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದ್ದರು. ಖಡ್ಗ ತಂದರೆ ಏನಾಗುತ್ತದೆ ಗೊತ್ತಾ ಎಂದಿದ್ದರು. ಈಗ ಬಂದಿದ್ದೀನಿ ಬಾರೋ. ಎಲ್ಲಿದೆ ನಿನ್ನ ಖಡ್ಗ’ ಎಂದು ಶಾಸಕ ಜಮೀರ್ ಅಹ್ಮದ್ ಸವಾಲು ಹಾಕಿದರು.</p>.<p>ರೆಡ್ಡಿಯವರ ಮನೆ ಮುಂದೆ ಧರಣಿ ನಡೆಸುವ ಉದ್ದೇಶದಿಂದ ನಗರಕ್ಕೆ ಸೋಮವಾರ ಬರಲು ಯತ್ನಿಸಿದ ಅವರನ್ನು ಪೊಲೀಸರು ಹೊರವಲಯದ ಕಂಟ್ರಿ ಕ್ಲಬ್ ಬಳಿ ತಡೆದರು.</p>.<p>ಸುದ್ದಿಗಾರರೊಂದಿಗೆ ಮಾತನಾಡಿ, ‘ಶಾಂತಿ ಭಂಗ ಮಾಡುವುದು ನಮ್ಮ ಉದ್ದೇಶವಲ್ಲ. ಪೊಲೀಸರೆಂದರೆ ಗೌರವವಿದೆ. ಬಂಧಿಸುವುದಾದರೆ ಬಂಧಿಸಲಿ. ಗೋಲಿಬಾರ್ ಆದರೂ ಮಾಡಲಿ’ ಎಂದರು.</p>.<p>‘ನಾವೇನೂ ಪಕ್ಷದ ವತಿಯಿಂದ ಬಂದಿಲ್ಲ. ಬರಲು ಪಕ್ಷದ ಅನುಮತಿ ಬೇಕಾಗಿಲ್ಲ. ರೆಡ್ಡಿ ಅವರ ಭಾಷಣಕ್ಕೆ ವಿರೋಧಿಸಲು ಬಂದಿರೋದು’ ಎಂದು ಪ್ರತಿಪಾದಿಸಿದರು.</p>.<p>ಮಾತನಾಡುತ್ತ, ಮುಂದುವರಿಯುತ್ತಿದ್ದ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಜಮೀರ್ ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಬೆಂಬಲವೂ ಇರಲಿಲ್ಲ. ನಗರದ ಕೆಲವು ಮುಸ್ಲಿಂ ಬೆಂಬಲಿಗರು, ಬೇರೆ ಊರುಗಳ ಬೆಂಬಲಿಗರಷ್ಟೇ ಇದ್ದರು. ರೆಡ್ಡಿಯವರ ಮನೆಗೆ ಪೊಲೀಸ್ ಭದ್ರತೆ<br />ಒದಗಿಸಲಾಗಿತ್ತು.</p>.<p>ಜ.3ರಂದು ಪ್ರಚೋದನಕಾರಿ ಭಾಷಣ ಮಾಡಿದ್ದ ರೆಡ್ಡಿಮನೆ ಮುಂದೆ ಜ.13ರಂದು ಧರಣಿ ನಡೆಸುವುದಾಗಿ ಜಮೀರ್ ಅಹ್ಮದ್, ಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದರು. ಧರಣಿಗೆ ಅವಕಾಶ ನೀಡಬಾರದು ಎಂದು ಶಾಸಕ ಕೆ.ಸಿ.ಕೊಂಡಯ್ಯ ಕೂಡ ಬಹಿರಂಗವಾಗಿ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದರು.</p>.<p>*****</p>.<p>ಶಾಸಕ ಜಮೀರ್ ಅಹ್ಮದ್ ಅವರು ಬಾರ್ಡರ್ಗೆ ಹೋಗಿ ಗಂಡಸ್ತನ ತೋರಿಸಲಿ, ಈ ಹಿಂದೆ ಹೇಳಿದಂತೆ ಭದ್ರತಾ ಸಿಬ್ಬಂದಿಯಾಗಿ ಯಡಿಯೂರಪ್ಪ ಅವರ ಮನೆ ಕಾಯಲಿ</p>.<p>-<strong>ಬಸನಗೌಡ ಪಾಟೀಲ ಯತ್ನಾಳ, ಶಾಸಕರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong>‘ಉಫ್ ಅಂದ್ರೆ ಯಾರೋ ಹಾರೋಗ್ತಾರೆ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದ್ದರು. ಖಡ್ಗ ತಂದರೆ ಏನಾಗುತ್ತದೆ ಗೊತ್ತಾ ಎಂದಿದ್ದರು. ಈಗ ಬಂದಿದ್ದೀನಿ ಬಾರೋ. ಎಲ್ಲಿದೆ ನಿನ್ನ ಖಡ್ಗ’ ಎಂದು ಶಾಸಕ ಜಮೀರ್ ಅಹ್ಮದ್ ಸವಾಲು ಹಾಕಿದರು.</p>.<p>ರೆಡ್ಡಿಯವರ ಮನೆ ಮುಂದೆ ಧರಣಿ ನಡೆಸುವ ಉದ್ದೇಶದಿಂದ ನಗರಕ್ಕೆ ಸೋಮವಾರ ಬರಲು ಯತ್ನಿಸಿದ ಅವರನ್ನು ಪೊಲೀಸರು ಹೊರವಲಯದ ಕಂಟ್ರಿ ಕ್ಲಬ್ ಬಳಿ ತಡೆದರು.</p>.<p>ಸುದ್ದಿಗಾರರೊಂದಿಗೆ ಮಾತನಾಡಿ, ‘ಶಾಂತಿ ಭಂಗ ಮಾಡುವುದು ನಮ್ಮ ಉದ್ದೇಶವಲ್ಲ. ಪೊಲೀಸರೆಂದರೆ ಗೌರವವಿದೆ. ಬಂಧಿಸುವುದಾದರೆ ಬಂಧಿಸಲಿ. ಗೋಲಿಬಾರ್ ಆದರೂ ಮಾಡಲಿ’ ಎಂದರು.</p>.<p>‘ನಾವೇನೂ ಪಕ್ಷದ ವತಿಯಿಂದ ಬಂದಿಲ್ಲ. ಬರಲು ಪಕ್ಷದ ಅನುಮತಿ ಬೇಕಾಗಿಲ್ಲ. ರೆಡ್ಡಿ ಅವರ ಭಾಷಣಕ್ಕೆ ವಿರೋಧಿಸಲು ಬಂದಿರೋದು’ ಎಂದು ಪ್ರತಿಪಾದಿಸಿದರು.</p>.<p>ಮಾತನಾಡುತ್ತ, ಮುಂದುವರಿಯುತ್ತಿದ್ದ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಜಮೀರ್ ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಬೆಂಬಲವೂ ಇರಲಿಲ್ಲ. ನಗರದ ಕೆಲವು ಮುಸ್ಲಿಂ ಬೆಂಬಲಿಗರು, ಬೇರೆ ಊರುಗಳ ಬೆಂಬಲಿಗರಷ್ಟೇ ಇದ್ದರು. ರೆಡ್ಡಿಯವರ ಮನೆಗೆ ಪೊಲೀಸ್ ಭದ್ರತೆ<br />ಒದಗಿಸಲಾಗಿತ್ತು.</p>.<p>ಜ.3ರಂದು ಪ್ರಚೋದನಕಾರಿ ಭಾಷಣ ಮಾಡಿದ್ದ ರೆಡ್ಡಿಮನೆ ಮುಂದೆ ಜ.13ರಂದು ಧರಣಿ ನಡೆಸುವುದಾಗಿ ಜಮೀರ್ ಅಹ್ಮದ್, ಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದರು. ಧರಣಿಗೆ ಅವಕಾಶ ನೀಡಬಾರದು ಎಂದು ಶಾಸಕ ಕೆ.ಸಿ.ಕೊಂಡಯ್ಯ ಕೂಡ ಬಹಿರಂಗವಾಗಿ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದರು.</p>.<p>*****</p>.<p>ಶಾಸಕ ಜಮೀರ್ ಅಹ್ಮದ್ ಅವರು ಬಾರ್ಡರ್ಗೆ ಹೋಗಿ ಗಂಡಸ್ತನ ತೋರಿಸಲಿ, ಈ ಹಿಂದೆ ಹೇಳಿದಂತೆ ಭದ್ರತಾ ಸಿಬ್ಬಂದಿಯಾಗಿ ಯಡಿಯೂರಪ್ಪ ಅವರ ಮನೆ ಕಾಯಲಿ</p>.<p>-<strong>ಬಸನಗೌಡ ಪಾಟೀಲ ಯತ್ನಾಳ, ಶಾಸಕರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>