ಬೆಂಗಳೂರು: ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರಿಗೆ ಚೆನ್ನೈನ ಶ್ರೀಕೃಷ್ಣ ಗಾನ ಸಭೆ ವತಿಯಿಂದ ಸಂಗೀತ ಚೂಡಾಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ರಾಜಕಾರಣಿ ಜಿ.ಕೆ.ವಾಸನ್ ಅವರು ಕದ್ರಿ ಅವರನ್ನು ಸನ್ಮಾನಿಸಿದರು. ಸಂಗೀತ ಕಲಾವಿದೆ ಸುಗುಣಾ ವರದಾಚಾರಿ ಅವರನ್ನೂ ಸನ್ಮಾನಿಸಲಾಯಿತು. ಸಂಗೀತ ವಿದ್ವಾನ್ ಡಾ.ಟಿ.ವಿ.ಗೋಪಾಲಕೃಷ್ಣನ್, ವಿಮರ್ಶಕ ಪ್ರೊ.ಮೈಸೂರು ವಿ. ಸುಬ್ರಹ್ಮಣ್ಯ ಅಭಿನಂದನಾ ಭಾಷಣ ಮಾಡಿದರು.