ಆರಂಭದಲ್ಲಿ ಜನ ಹೆಚ್ಚಾದರೂ ಊಟಕ್ಕೆ ಕೊರತೆಯಾಗದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದಾಗಿ ಆಹಾರ ಸಮಿತಿ ಹೇಳಿತ್ತು. ಅಲ್ಲದೇ ಸಮ್ಮೇಳನದಲ್ಲಿ ಊಟ, ವಸತಿ ಮತ್ತು ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಆದರೆ ಅರ್ಧ ಸಮ್ಮೇಳನ ಯಶಸ್ವಿಯಾದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದರು. ಇದೆಲ್ಲವೂ ಮೊದಲ ದಿನವೇ ತಲೆಕೆಳಗಾಗಿ ತೊಂದರೆ ಅನುಭವಿಸುವಂತಾಯಿತು.