ಅಧಿವೇಶನದಲ್ಲಿ ಕಾಂಗ್ರೆಸ್ನ ಶಿವಲಿಂಗೇಗೌಡ ಮತ್ತು ಬಿಜೆಪಿಯ ಆರ್. ಅಶೋಕ್ ನಡುವೆ ವಾಕ್ಸಮರ ನಡೆಯಿತು. ‘ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ಗೆ ನೀವು ಹೋಗಿದ್ದೀರಿ. ಈಗಲಾದರೂ ನಿಮ್ಮ ಸ್ಟೈಲ್ ಚೇಂಜ್ ಮಾಡಿಕೊಳ್ಳಿ’ ಎಂದು ಆರ್. ಅಶೋಕ್ ಅವರು ಶಿವಲಿಂಗೇಗೌಡ ಅವರ ಕಾಲೆಳೆದರು. ‘ಅದು ನಮ್ಮ ಪರ್ಸನಲ್. ಅದೆಲ್ಲಾ ನಿಮಗೆ ಯಾಕೆ’ ಎಂದು ಶಿವಲಿಂಗೇಗೌಡರು ಪ್ರಶ್ನಿಸಿದರು.