ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಚೀಟಿ: ಶೆಟ್ಟರ್
ವಿರೋಧ ಪಕ್ಷದ ನಾಯಕ ಸ್ಥಾನ ಖಾಲಿ ಇದೆ. ಆ ಸ್ಥಾನಕ್ಕೆ ಸಮರ್ಥರೆಂದು ತೋರಿಸಲು ಬಹುತೇಕ ಸದಸ್ಯರು ಎದ್ದು ನಿಂತು ಗದ್ದಲ ಮಾಡುತ್ತಿದ್ದಾರೆ. ಏನೇ ಇರಲಿ ಸಂವಿಧಾನಾತ್ಮಕ ಸ್ಥಾನ ಖಾಲಿ ಬಿಡಬಾರದು. ವಿಧಾನಸಭೆಯಲ್ಲಿ ಕುಮಾರಸ್ವಾಮಿ ನಾಯಕರಾಗುತ್ತಾರೆ. ಇಲ್ಲೂ ಬೇಗ ಸ್ಥಾನ ಭರ್ತಿ ಮಾಡಲಿ ಎಂದು ಸಿದ್ದರಾಮಯ್ಯ ಹೇಳಿದರು. ಅದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ನ ಜಗದೀಶ ಶೆಟ್ಟರ್ ಅವರ ಹೈಕಮಾಂಡ್ ಆಯ್ಕೆ ಮಾಡುವವರಿಗೂ ಸ್ಥಾನ ಖಾಲಿ ಬಿಡುವುದು ಬೇಡ. ಸಭಾಪತಿಗಳು ಬಿಜೆಪಿಯ ಎಲ್ಲರ ಹೆಸರು ಬರೆದು ಚೀಟಿ ಎತ್ತಲಿ. ಯಾರ ಹೆಸರು ಬರುತ್ತದೋ ಅವರನ್ನು ಅಧಿಕೃತ ಆಯ್ಕೆಯವರೆಗೂ ವಿರೋಧ ಪಕ್ಷದ ನಾಯಕರೆಂದು ಪರಿಗಣಿಸಲಿ ಎಂದರು. ಅವರ ಮಾತಿಗೆ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು.