ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕರ್ನಾಟಕದಿಂದಲೇ ಬಿಜೆಪಿ ಅವನತಿ ಆರಂಭ: ಸಿದ್ದರಾಮಯ್ಯ

ಪ್ರಧಾನಿ ಮೋದಿ ಜನಪ್ರಿಯತೆ ಇಳಿಮುಖ: ಸಿದ್ದರಾಮಯ್ಯ
Published : 14 ಜುಲೈ 2023, 15:50 IST
Last Updated : 14 ಜುಲೈ 2023, 15:50 IST
ಫಾಲೋ ಮಾಡಿ
Comments
ಬಿಜೆಪಿಗರ ಕೆರಳಿಸಿದ ಹಿಟ್ಲರ್‌ ಕಥೆ
‘ಹಿಟ್ಲರ್‌ ಜರ್ಮನ್ನರೇ ಶ್ರೇಷ್ಠ ಎಂದು ಸದಾ ಪ್ರತಿಪಾದಿಸುತ್ತಿದ್ದ. ಆತನ ದಿಸೆಯಿಂದಾಗಿ ಎರಡು ವಿಶ್ವ ಮಹಾಯುದ್ದಗಳೇ ನಡೆದವು. ಜನಾಂಗೀಯ ಕಾರಣಕ್ಕಾಗಿ ಯಹೂದಿಗಳನ್ನು ದ್ವೇಷಿಸುತ್ತಿದ್ದ. ಆದರೆ ಯಹೂದಿಗಳಿಗಿಂತ ಹೆಚ್ಚಾಗಿ ಜರ್ಮನ್ನರನ್ನೇ ಕೊಂದ. ಕೊನೆಗೆ ಆತ್ಮಹತ್ಯೆ ಮಾಡಿಕೊಂಡ’ ಎಂದು ಸಿದ್ದರಾಮಯ್ಯ ಹೇಳಿದರು. ಹಿಟ್ಲರ್‌ ವಿಷಯ ಪ್ರಸ್ತಾಪಿಸುತ್ತಿದಂತೆ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಮಾತಿಗೆ ಅಡ್ಡಿಪಡಿಸಿದರು.   ‘ಹಿಟ್ಲರ್‌ ಬಗ್ಗೆ ಮಾತನಾಡಿದರೆ ಬಿಜೆಪಿಗೇಕೆ ಕೋಪ‘ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ‘ನೀವು ಹಿಟ್ಲರ್‌ ರೀತಿ ಮಾತನಾಡಿದರೆ ನಾವು ಹೇಗೆ ಸಹಿಸುವುದು’ ಎಂದು ಭಾರತಿ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ‘ಬಿಜೆಪಿಯವರು ಒಳ್ಳೆಯವರೆ. ಕೇಶವ ಕೃಪಾವನ್ನು (ಆರೆಸ್ಸೆಸ್‌ ಕೇಂದ್ರ ಸ್ಥಾನ) ನೋಡಿದಾಕ್ಷಣ ಹಾಗೆ ಮಾಡ್ತಾರೆ’ ಎಂದು ಮುಖ್ಯಮಂತ್ರಿ ಟೀಕಿಸಿದರು.
ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಚೀಟಿ: ಶೆಟ್ಟರ್‌
ವಿರೋಧ ಪಕ್ಷದ ನಾಯಕ ಸ್ಥಾನ ಖಾಲಿ ಇದೆ. ಆ ಸ್ಥಾನಕ್ಕೆ ಸಮರ್ಥರೆಂದು ತೋರಿಸಲು ಬಹುತೇಕ ಸದಸ್ಯರು ಎದ್ದು ನಿಂತು ಗದ್ದಲ ಮಾಡುತ್ತಿದ್ದಾರೆ. ಏನೇ ಇರಲಿ ಸಂವಿಧಾನಾತ್ಮಕ ಸ್ಥಾನ ಖಾಲಿ ಬಿಡಬಾರದು. ವಿಧಾನಸಭೆಯಲ್ಲಿ ಕುಮಾರಸ್ವಾಮಿ ನಾಯಕರಾಗುತ್ತಾರೆ. ಇಲ್ಲೂ ಬೇಗ ಸ್ಥಾನ ಭರ್ತಿ ಮಾಡಲಿ ಎಂದು ಸಿದ್ದರಾಮಯ್ಯ ಹೇಳಿದರು. ಅದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ಜಗದೀಶ ಶೆಟ್ಟರ್ ಅವರ ಹೈಕಮಾಂಡ್‌ ಆಯ್ಕೆ ಮಾಡುವವರಿಗೂ ಸ್ಥಾನ ಖಾಲಿ ಬಿಡುವುದು ಬೇಡ.  ಸಭಾಪತಿಗಳು ಬಿಜೆಪಿಯ ಎಲ್ಲರ ಹೆಸರು ಬರೆದು ಚೀಟಿ ಎತ್ತಲಿ. ಯಾರ ಹೆಸರು ಬರುತ್ತದೋ ಅವರನ್ನು ಅಧಿಕೃತ ಆಯ್ಕೆಯವರೆಗೂ ವಿರೋಧ ಪಕ್ಷದ ನಾಯಕರೆಂದು ಪರಿಗಣಿಸಲಿ ಎಂದರು. ಅವರ ಮಾತಿಗೆ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT