ವ್ಯಾಪಾರ– ವಹಿವಾಟು ಎಲ್ಲ ನಿಮ್ಮ ಕಾಲದಲ್ಲಿ ನಡೆಯುತ್ತಿತ್ತು. ವ್ಯಾಪಾರ ಮಾಡುವ ದರ್ದು ನಮಗೆ ಇಲ್ಲ, ಯತ್ನಾಳ ನೀನು ಚೀಪ್ ಆಗಿ ಮಾತನಾಡಬೇಡ. ಏಯ್ ಕೂತ್ಕೊ ಸುಮ್ಮನೆ. ನೀನು ಕರೆದಾಗ ಆ ಅಧಿಕಾರಿ ಬಂದಿಲ್ಲ ಅಂದರೆ, ಅವನನ್ನು ತೆಗೆದು ಹಾಕಬೇಕಾ?
ಬೈರತಿ ಸುರೇಶ್
ಯಾವುದೇ ಹುದ್ದೆಗೆ ಯಾರನ್ನು ಬೇಕಾದರೂ ನೇಮಿಸುವ ಅಧಿಕಾರ ಸರ್ಕಾರದ್ದು. ಸಿ.ಎಂ ಹುದ್ದೆಗೆ ₹2500 ಕೋಟಿ, ಮಂತ್ರಿ ಹುದ್ದೆಗೆ ₹100 ಕೋಟಿ ಡೀಲ್ ಆಗಿದೆ ಎಂದು ಹೇಳಿದ್ದಿರಿ. ಏಯ್ ಕೂತ್ಕೊಳ್ಳಯ್ಯ, ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ನಿಮ್ಮ ಸಿಎಂ ಸುಮ್ಮನಿದ್ದರು. ನಾನಾಗಿದ್ದರೆ 24 ಗಂಟೆಯಲ್ಲಿ ಉಚ್ಚಾಟನೆ ಮಾಡ್ತಿದ್ದೆ
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ನಿಮ್ಮಂತ ಭ್ರಷ್ಟರ ಪಕ್ಷಕ್ಕೆ ಯಾರು ಸೇರುತ್ತಾರೆ. ಭ್ರಷ್ಟಾಚಾರದ ಬಂಡೆ ನೀನು. ನನ್ನ ಉಚ್ಚಾಟನೆ ಮಾಡುತ್ತೇನೆ ಅಂತ ಹೇಳೋಕೆ ಇವರು ಯಾರು? ನಮ್ಮ ಪಕ್ಷದವರೇನಲ್ಲ. ನಾನೇನು ಅವರ ಪಕ್ಷದಲ್ಲಿದ್ದೀನಾ