ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿ, ಧರಣಿ ನಡೆಸಿದಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು. ವಿಧಾನಪರಿಷತ್ತಿನಲ್ಲಿ ಇದೇ ವಿಷಯದ ಚರ್ಚೆಯ ವೇಳೆ, ಏಕವಚನ ಬಳಸಿದ್ದಾರೆಂದು ಸಿಟ್ಟಿಗೆದ್ದ ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರತ್ತ ಮುನ್ನುಗ್ಗಿದ ಘಟನೆಯೂ ನಡೆಯಿತು.