<p><strong>ಬಿಡದಿ (ರಾಮನಗರ):</strong> ಇಲ್ಲಿನ ಕೇತಗಾನಹಳ್ಳಿಯಲ್ಲಿ ಇರುವ ತೋಟದ ಮನೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಕುಟುಂಬವು 9 ದಿನಗಳ ಕಾಲ ಮಹಾಯಾಗ ಹಮ್ಮಿಕೊಂಡಿದೆ.</p>.<p>ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ಯಾಗಕ್ಕೆ ಚಾಲನೆ ನೀಡಲಾಯಿತು. ಶಾಸಕರಾದ ಎಚ್.ಡಿ. ಕುಮಾರಸ್ವಾಮಿ –ಅನಿತಾ ದಂಪತಿ, ಎಚ್.ಡಿ. ರೇವಣ್ಣ ಹಾಗೂ ದೇವೇಗೌಡರ ಕುಟುಂಬದ ಆಪ್ತರಷ್ಟೇ ಪಾಲ್ಗೊಂಡಿದ್ದರು.</p>.<p>ಆಯತ ಚಂಡಿಯಾಗ ಜತೆಗೆ ಮಹಾರುದ್ರ ಸ್ವಾಹಾಕಾರ ಯಾಗವನ್ನು ಎಚ್ಡಿಕೆ ಕುಟುಂಬ ಕೈಗೊಂಡಿದೆ. ಕರ್ನಾಟಕ, ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರ ಸೇರಿದಂತೆ ನಾನಾ ಕಡೆಯಿಂದ 250 ರಿಂದ 300 ಪುರೋಹಿತರು ಈ ಯಾಗ ನಡೆಸಿಕೊಡುತ್ತಿದ್ದಾರೆ.</p>.<p>ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಈ ಹಿಂದೆ ರಾಜಕೀಯ ದಿಗ್ವಿಜಯಕ್ಕಾಗಿ ಇಂತಹದ್ದೇ ಯಾಗ ನಡೆಸಿದ್ದರು. ಅಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರೇ ಇಲ್ಲಿಯೂ ನೇತೃತ್ವ ವಹಿಸಿದ್ದಾರೆ.</p>.<p>‘ನಮ್ಮ ತಂದೆ ಎಚ್.ಡಿ. ದೇವೇಗೌಡರ ಆರೋಗ್ಯ ವೃದ್ಧಿಯಾಗಲಿ, ನಮ್ಮ ಪಂಚರತ್ನ ಯೋಜನೆಗಳು ಯಶಸ್ವಿಯಾಗಲಿ ಮತ್ತು ನಾಡು ಸಮೃದ್ಧಿಯಾಗಲಿ ಎನ್ನುವ ಕಾರಣದಿಂದ ಈ ಯಾಗ ಹಮ್ಮಿಕೊಂಡಿದ್ದೇವೆ’ ಎಂದು ಕುಮಾರಸ್ವಾಮಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಡದಿ (ರಾಮನಗರ):</strong> ಇಲ್ಲಿನ ಕೇತಗಾನಹಳ್ಳಿಯಲ್ಲಿ ಇರುವ ತೋಟದ ಮನೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಕುಟುಂಬವು 9 ದಿನಗಳ ಕಾಲ ಮಹಾಯಾಗ ಹಮ್ಮಿಕೊಂಡಿದೆ.</p>.<p>ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ಯಾಗಕ್ಕೆ ಚಾಲನೆ ನೀಡಲಾಯಿತು. ಶಾಸಕರಾದ ಎಚ್.ಡಿ. ಕುಮಾರಸ್ವಾಮಿ –ಅನಿತಾ ದಂಪತಿ, ಎಚ್.ಡಿ. ರೇವಣ್ಣ ಹಾಗೂ ದೇವೇಗೌಡರ ಕುಟುಂಬದ ಆಪ್ತರಷ್ಟೇ ಪಾಲ್ಗೊಂಡಿದ್ದರು.</p>.<p>ಆಯತ ಚಂಡಿಯಾಗ ಜತೆಗೆ ಮಹಾರುದ್ರ ಸ್ವಾಹಾಕಾರ ಯಾಗವನ್ನು ಎಚ್ಡಿಕೆ ಕುಟುಂಬ ಕೈಗೊಂಡಿದೆ. ಕರ್ನಾಟಕ, ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರ ಸೇರಿದಂತೆ ನಾನಾ ಕಡೆಯಿಂದ 250 ರಿಂದ 300 ಪುರೋಹಿತರು ಈ ಯಾಗ ನಡೆಸಿಕೊಡುತ್ತಿದ್ದಾರೆ.</p>.<p>ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಈ ಹಿಂದೆ ರಾಜಕೀಯ ದಿಗ್ವಿಜಯಕ್ಕಾಗಿ ಇಂತಹದ್ದೇ ಯಾಗ ನಡೆಸಿದ್ದರು. ಅಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರೇ ಇಲ್ಲಿಯೂ ನೇತೃತ್ವ ವಹಿಸಿದ್ದಾರೆ.</p>.<p>‘ನಮ್ಮ ತಂದೆ ಎಚ್.ಡಿ. ದೇವೇಗೌಡರ ಆರೋಗ್ಯ ವೃದ್ಧಿಯಾಗಲಿ, ನಮ್ಮ ಪಂಚರತ್ನ ಯೋಜನೆಗಳು ಯಶಸ್ವಿಯಾಗಲಿ ಮತ್ತು ನಾಡು ಸಮೃದ್ಧಿಯಾಗಲಿ ಎನ್ನುವ ಕಾರಣದಿಂದ ಈ ಯಾಗ ಹಮ್ಮಿಕೊಂಡಿದ್ದೇವೆ’ ಎಂದು ಕುಮಾರಸ್ವಾಮಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>