ತಮ್ಮನ್ನು ಎಲ್ಲ ಕಡೆಗಳಿಂದಲೂ ಸದಸ್ಯರು ಮುತ್ತಿಕೊಂಡಾಗ ಧರ್ಮೇಗೌಡರು ಅಸಹಾಯಕರಾಗಿ ಕುಳಿತಿದ್ದರು. ಆಗ ನಾರಾಯಣಸ್ವಾಮಿ ಅವರು ಧರ್ಮೇಗೌಡರ ತೋಳನ್ನು ಹಿಡಿದು ಬಲ ಹಾಕಿ ರಭಸದಿಂದ ಎಳೆದರು. ಧರ್ಮೇಗೌಡ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರೂ ಬಿಡದ ನಾರಾಯಣಸ್ವಾಮಿ, ಪೀಠದಿಂದ ಆಚೆ ಎಳೆದು ದೂಡಿದರು. ಆಗ ಆಯತಪ್ಪಿ ಬೀಳುತ್ತಿದ್ದ ಧರ್ಮೇಗೌಡರನ್ನು ಶ್ರೀಕಂಠೇಗೌಡ ಅವರು ಗಟ್ಟಿಯಾಗಿ ಅಪ್ಪಿಕೊಂಡು ರಕ್ಷಿಸಿದರು.