ಇತ್ತ ಜೆಡಿಎಸ್, ಕೇವಲ 2 ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದೆ. ಕಳೆದ ಬಾರಿ 25 ಕ್ಷೇತ್ರಗಳಲ್ಲಿ ಜೆಡಿಎಸ್ ಕೈಯಲ್ಲಿ 4 ಸ್ಥಾನಗಳಿದ್ದವು. ಜಾತ್ಯತೀತ ಜನತಾ ದಳವು ತನ್ನ ಭದ್ರಕೋಟೆ ಎಂದೇ ಹೆಸರಾಗಿದ್ದ ಮಂಡ್ಯ, ತುಮಕೂರು, ಮೈಸೂರು ಭಾಗಗಳಲ್ಲಿ ದಯನೀಯ ಹಿನ್ನಡೆ ಕಂಡಿದೆ. ಗೆದ್ದದ್ದು ಹಾಸನ ಕ್ಷೇತ್ರದಲ್ಲಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ. ಸೂರಜ್ ಅವರು ಗೌಡ ಕುಟುಂಬದಿಂದ ರಾಜಕೀಯಕ್ಕೆ ಕಾಲಿಟ್ಟಿರುವ 8ನೇ ಸದಸ್ಯ.