<p><strong>ಬೆಂಗಳೂರು: </strong>‘ನಾಡಗೀತೆಗೆಮೈಸೂರು ಅನಂತಸ್ವಾಮಿ ಸಂಯೋಜಿಸಿರುವ ಧಾಟಿಯನ್ನೇ ಅನುಷ್ಠಾನಕ್ಕೆ ತರಬೇಕು’ ಎಂದುಸುಗಮ ಸಂಗೀತ ಕಲಾವಿದರ ಬಳಗ ಆಗ್ರಹಿಸಿದೆ.</p>.<p>ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದಸದಸ್ಯ ಹಾಗೂ ಲಹರಿ ಸಂಸ್ಥೆಯ ವೇಲು, ‘ಮೈಸೂರು ಅನಂತಸ್ವಾಮಿ ಅವರ ಸಂಯೋಜನೆಯಲ್ಲಿ ನಾಡಗೀತೆಧಾಟಿ ನಮ್ಮ ಸಂಸ್ಥೆಯಲ್ಲೇ ದಾಖಲಾಯಿತು. ಧ್ವನಿಸುರುಳಿ ಸಮಯದ ದೃಷ್ಟಿಯಿಂದ ಕೆಲವು ಚರಣಗಳನ್ನು ಬಿಡಲಾಗಿತ್ತು’ ಎಂದರು.</p>.<p>ಗಾಯಕಿ ಬಿ.ಕೆ.ಸುಮಿತ್ರ, ‘ಸರ್ಕಾರ ಕಾಲಹರಣ ಮಾಡದೆ, ಅನಂತಸ್ವಾಮಿ ಸಂಯೋಜಿಸಿರುವ ಧಾಟಿಯನ್ನೇ ನಾಡಗೀತೆಗೆ ಅಂತಿಮಗೊಳಿಸಬೇಕು’ ಎಂದು ಆಗ್ರಹಿಸಿದರು.</p>.<p>‘ಎಚ್.ಆರ್.ಲೀಲಾವತಿ ಸಮಿತಿಯುಮೈಸೂರು ಅನಂತಸ್ವಾಮಿ ಅವರ ಸಂಯೋಜನೆಯ ಧಾಟಿಯನ್ನು ನಾಡಗೀತೆಗೆ ಅಳವಡಿಸುವುದು ಸೂಕ್ತ ಎಂದು ಶಿಫಾರಸು ಮಾಡಿದೆ. ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಂತಹವರ ಮಾತಿಗೆ ಕಿವಿಗೊಡದೆ, ನಾಡಗೀತೆಗೆಮೈಸೂರು ಅನಂತಸ್ವಾಮಿ ಧಾಟಿ ಅನುಷ್ಠಾನಗೊಳಿಸಬೇಕು’ ಎಂದುಸುಗಮ ಸಂಗೀತ ಕಲಾವಿದರ ಬಳಗದ ಸದಸ್ಯರು ಆಗ್ರಹಿಸಿದರು.</p>.<p>ಸಂಗೀತ ನಿರ್ದೇಶಕ ವಿ.ಮನೋಹರ್, ಗಾಯಕ ಗರ್ತಿಕೆರೆ ರಾಘಣ್ಣ, ಲಯ ವಾದ್ಯಗಾರ ಎಸ್.ಬಾಲಿ, ಗೋಪಿ, ಸುಗಮ ಸಂಗೀತ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ, ಗಾಯಕ ಆನಂದ ಮಾದಲಗೆರೆ, ಸಂಗೀತ ನಿರ್ದೇಶಕ ಉಪಾಸನಾ ಮೋಹನ್ ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ನಾಡಗೀತೆಗೆಮೈಸೂರು ಅನಂತಸ್ವಾಮಿ ಸಂಯೋಜಿಸಿರುವ ಧಾಟಿಯನ್ನೇ ಅನುಷ್ಠಾನಕ್ಕೆ ತರಬೇಕು’ ಎಂದುಸುಗಮ ಸಂಗೀತ ಕಲಾವಿದರ ಬಳಗ ಆಗ್ರಹಿಸಿದೆ.</p>.<p>ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದಸದಸ್ಯ ಹಾಗೂ ಲಹರಿ ಸಂಸ್ಥೆಯ ವೇಲು, ‘ಮೈಸೂರು ಅನಂತಸ್ವಾಮಿ ಅವರ ಸಂಯೋಜನೆಯಲ್ಲಿ ನಾಡಗೀತೆಧಾಟಿ ನಮ್ಮ ಸಂಸ್ಥೆಯಲ್ಲೇ ದಾಖಲಾಯಿತು. ಧ್ವನಿಸುರುಳಿ ಸಮಯದ ದೃಷ್ಟಿಯಿಂದ ಕೆಲವು ಚರಣಗಳನ್ನು ಬಿಡಲಾಗಿತ್ತು’ ಎಂದರು.</p>.<p>ಗಾಯಕಿ ಬಿ.ಕೆ.ಸುಮಿತ್ರ, ‘ಸರ್ಕಾರ ಕಾಲಹರಣ ಮಾಡದೆ, ಅನಂತಸ್ವಾಮಿ ಸಂಯೋಜಿಸಿರುವ ಧಾಟಿಯನ್ನೇ ನಾಡಗೀತೆಗೆ ಅಂತಿಮಗೊಳಿಸಬೇಕು’ ಎಂದು ಆಗ್ರಹಿಸಿದರು.</p>.<p>‘ಎಚ್.ಆರ್.ಲೀಲಾವತಿ ಸಮಿತಿಯುಮೈಸೂರು ಅನಂತಸ್ವಾಮಿ ಅವರ ಸಂಯೋಜನೆಯ ಧಾಟಿಯನ್ನು ನಾಡಗೀತೆಗೆ ಅಳವಡಿಸುವುದು ಸೂಕ್ತ ಎಂದು ಶಿಫಾರಸು ಮಾಡಿದೆ. ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಂತಹವರ ಮಾತಿಗೆ ಕಿವಿಗೊಡದೆ, ನಾಡಗೀತೆಗೆಮೈಸೂರು ಅನಂತಸ್ವಾಮಿ ಧಾಟಿ ಅನುಷ್ಠಾನಗೊಳಿಸಬೇಕು’ ಎಂದುಸುಗಮ ಸಂಗೀತ ಕಲಾವಿದರ ಬಳಗದ ಸದಸ್ಯರು ಆಗ್ರಹಿಸಿದರು.</p>.<p>ಸಂಗೀತ ನಿರ್ದೇಶಕ ವಿ.ಮನೋಹರ್, ಗಾಯಕ ಗರ್ತಿಕೆರೆ ರಾಘಣ್ಣ, ಲಯ ವಾದ್ಯಗಾರ ಎಸ್.ಬಾಲಿ, ಗೋಪಿ, ಸುಗಮ ಸಂಗೀತ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ, ಗಾಯಕ ಆನಂದ ಮಾದಲಗೆರೆ, ಸಂಗೀತ ನಿರ್ದೇಶಕ ಉಪಾಸನಾ ಮೋಹನ್ ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>