ಬರಗಾಲ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ. ಸಚ್ಚಾರಿತ್ರ್ಯ, ಸಂಸ್ಕಾರವಂತ ಕೃಷಿ ಸಚಿವರೇ (ಎನ್. ಚೆಲುವರಾಯಸ್ವಾಮಿ) ಬರಗಾಲ ಬಂದಿದ್ದು ನಿನ್ನೆ, ಮೊನ್ನೆಯಲ್ಲ, ಮುಂಗಾರು ಪೂರ್ವ ಮಳೆ ವಿಫಲವಾದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಹೇಳಿದೆ.
ಮೂರು ತಿಂಗಳ ಹಿಂದೆಯೇ ಬರದ ಛಾಯೆ ಎದ್ದು ಕಾಣುತ್ತಿತ್ತು. ನಿರಂತರವಾಗಿ ಬಿಜೆಪಿ ಈ ಬಗ್ಗೆ ಎಚ್ಚರಿಸಿದರೂ ಜೂನ್, ಜುಲೈ, ಆಗಸ್ಟ್ ಎಂದು ಕಾಲಹರಣ ಮಾಡಿದಿರಿ. ಸಾಲದ್ದಕ್ಕೆ ನಿಮ್ಮ ಸ್ವಾರ್ಥಕ್ಕಾಗಿ ಕೆಆರ್ಎಸ್ನಿಂದ ನೀರು ಬಿಟ್ಟು, ರಾಜ್ಯದ ರೈತರ ಬದುಕನ್ನು ಮೂರಾಬಟ್ಟೆಯಾಗಿಸಿದ್ದೀರಿ. ಈಗ ಬರಗಾಲವೆಂಬುದು ಯಾರ ಹಿಡಿತದಲ್ಲಿಯೂ ಇಲ್ಲ ಎಂದು ತೇಪೆ ಹಚ್ಚುತ್ತೀದ್ದೀರಿ. ಇದೇನಾ ತಾವು ಈ ನಾಡಿನ ಜನತೆಯ ಮೇಲಿಟ್ಟಿರುವ ಕಾಳಜಿ ಎಂದು ಪ್ರಶ್ನಿಸಿದೆ.