<p><strong>ಬೆಂಗಳೂರು</strong>: ರಾಜ್ಯದ ಎಲ್ಲ ಸರ್ಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ, ಸರ್ಕಾರದ ಇತರೆ ಅಧೀನದ ಸಂಸ್ಥೆಗಳಿಗೆ ಸೇರಿರುವ ನೋಂದಣಿಯಾಗಿ 15 ವರ್ಷವಾದ ವಾಹನಗಳನ್ನು ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ (ಆರ್ವಿಎಸ್ಎಫ್) ಕೇಂದ್ರಗಳಲ್ಲಿಯೇ ಕಡ್ಡಾಯವಾಗಿ ನಾಶಪಡಿಸಲು ಸಾರಿಗೆ ಇಲಾಖೆ ಆದೇಶಿಸಿದೆ.</p>.<p>ಮೋಟಾರು ವಾಹನಗಳ ಕಾಯ್ದೆ–1988ರ ಕಲಂ 64 (ಪಿ)ರಂತೆ ರಾಜ್ಯದಲ್ಲಿ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿ– ಕರ್ನಾಟಕ– 2022 ಅನ್ನು ಜಾರಿಗೊಳಿಸಲಾಗಿದೆ. ಅದರಂತೆ ಸರ್ಕಾರದ 500 ವಾಹನಗಳನ್ನು ಆದ್ಯತೆ ಮತ್ತು ಉಪಯೋಗದ ಆಧಾರದ ಮೇಲೆ ಹಂತಹಂತವಾಗಿ ನಾಶಪಡಿಸಲು ಅನುಮೋದನೆ ನೀಡಲಾಗಿದೆ.</p>.<p>ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದಿಂದ ಪ್ರೋತ್ಸಾಹಧನ ಬಿಡುಗಡೆಯಾಗಬೇಕಾದರೆ 15 ವರ್ಷಗಳು ಮೀರಿದ ಎಲ್ಲ ಸರ್ಕಾರಿ ವಾಹನಗಳನ್ನು ಆರ್ವಿಎಸ್ಎಫ್ನಲ್ಲಿಯೇ ನಾಶಪಡಿಸಬೇಕು. ಆದ್ದರಿಂದ, ಖಾಸಗಿ ಕೇಂದ್ರಗಳಲ್ಲಿ ವಾಹನಗಳನ್ನು ನಾಶಪಡಿಸದೆ, ರಾಜ್ಯದಲ್ಲಿ ಸ್ಥಾಪಿತವಾಗಿರುವ ನೋಂದಾಯಿತ ಆರ್ವಿಎಸ್ಎಫ್ ಕೇಂದ್ರಗಳಲ್ಲಿಯೇ ವಾಹನಗಳನ್ನು ನಾಶಪಡಿಸಲು ಆದೇಶಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜ್ಯದ ಎಲ್ಲ ಸರ್ಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ, ಸರ್ಕಾರದ ಇತರೆ ಅಧೀನದ ಸಂಸ್ಥೆಗಳಿಗೆ ಸೇರಿರುವ ನೋಂದಣಿಯಾಗಿ 15 ವರ್ಷವಾದ ವಾಹನಗಳನ್ನು ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ (ಆರ್ವಿಎಸ್ಎಫ್) ಕೇಂದ್ರಗಳಲ್ಲಿಯೇ ಕಡ್ಡಾಯವಾಗಿ ನಾಶಪಡಿಸಲು ಸಾರಿಗೆ ಇಲಾಖೆ ಆದೇಶಿಸಿದೆ.</p>.<p>ಮೋಟಾರು ವಾಹನಗಳ ಕಾಯ್ದೆ–1988ರ ಕಲಂ 64 (ಪಿ)ರಂತೆ ರಾಜ್ಯದಲ್ಲಿ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿ– ಕರ್ನಾಟಕ– 2022 ಅನ್ನು ಜಾರಿಗೊಳಿಸಲಾಗಿದೆ. ಅದರಂತೆ ಸರ್ಕಾರದ 500 ವಾಹನಗಳನ್ನು ಆದ್ಯತೆ ಮತ್ತು ಉಪಯೋಗದ ಆಧಾರದ ಮೇಲೆ ಹಂತಹಂತವಾಗಿ ನಾಶಪಡಿಸಲು ಅನುಮೋದನೆ ನೀಡಲಾಗಿದೆ.</p>.<p>ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದಿಂದ ಪ್ರೋತ್ಸಾಹಧನ ಬಿಡುಗಡೆಯಾಗಬೇಕಾದರೆ 15 ವರ್ಷಗಳು ಮೀರಿದ ಎಲ್ಲ ಸರ್ಕಾರಿ ವಾಹನಗಳನ್ನು ಆರ್ವಿಎಸ್ಎಫ್ನಲ್ಲಿಯೇ ನಾಶಪಡಿಸಬೇಕು. ಆದ್ದರಿಂದ, ಖಾಸಗಿ ಕೇಂದ್ರಗಳಲ್ಲಿ ವಾಹನಗಳನ್ನು ನಾಶಪಡಿಸದೆ, ರಾಜ್ಯದಲ್ಲಿ ಸ್ಥಾಪಿತವಾಗಿರುವ ನೋಂದಾಯಿತ ಆರ್ವಿಎಸ್ಎಫ್ ಕೇಂದ್ರಗಳಲ್ಲಿಯೇ ವಾಹನಗಳನ್ನು ನಾಶಪಡಿಸಲು ಆದೇಶಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>