ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಡಾ. ಅವಿನಾಶ್ ಜಾಧವ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ’ಕೇಂದ್ರ ಸರ್ಕಾರದ ಜತೆಗೆ ಸಭೆ ಶುಕ್ರವಾರ ನಿಗದಿಯಾಗಿದ್ದು, ರಾಜ್ಯ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ. ಜನವರಿ ಅಥವಾ ಫೆಬ್ರುವರಿಯಲ್ಲಿ ಟೆಂಡರ್ ಕರೆಯಲಾಗುವುದು‘ ಎಂದರು. ಜೆಸ್ಕಾಂ ಹಾಗೂ ಹೆಸ್ಕಾಂ ವ್ಯಾಪ್ತಿಯಲ್ಲಿ ₹3,089 ಕೋಟಿ ವೆಚ್ಚದಲ್ಲಿ ವಿದ್ಯುತ್ ಪ್ರಸರಣ ಕೇಂದ್ರಗಳ ಆಧುನೀಕರಣ ಮಾಡಲಾಗುತ್ತದೆ. 33 ಕೆ.ವಿ.ಯ 42 ವಿದ್ಯುತ್ ಕೇಂದ್ರಗಳನ್ನು ಹಾಗೂ 66 ಕೆ.ವಿ.ಯ 13 ಕೇಂದ್ರಗಳನ್ನು ಬಗೆಹರಿಸಲಾಗುವುದು. ಆಗ ವಿದ್ಯುತ್ ಕೇಂದ್ರದ ಬಹುತೇಕ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ಹೇಳಿದರು.