‘ಒಂದೇ ಸ್ಥಳ, ಒಂದೇ ಹುದ್ದೆಯ ಸೇವೆ ಪರಿಗಣಿಸಿದರೆ ಸೇವಾ ಕೃಪಾಂಕದಲ್ಲಿ (ವೆಯಿಟೇಜ್) ವ್ಯತ್ಯಾಸವಾಗಿ ಬಡ್ತಿ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತದೆ. ಹಾಗಾಗಿ, ಎಲ್ಲ ವಲಯಗಳ ಸೇವೆ ಪರಿಗಣಿಸಬೇಕು. ವೃಂದದ ಮಿತಿ ತಗೆದುಹಾಕಬೇಕು’ ಎಂದು ಶಿಕ್ಷಕರಾದ ಶಿವಕುಮಾರ್ ಮತ್ತಿತರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೆಎಟಿ ವರ್ಗಾವಣೆ ಪ್ರಕ್ರಿಯೆಗೆ ತಡೆ ನೀಡಿದೆ.