ಏತನ್ಮಧ್ಯೆ, ‘ಸಮಿತಿ ನಡೆಸಿದ ಮೊದಲ ಸಭೆಯಿಂದ ಸಮಿತಿಯ ಆಡಳಿತ ಕಾಲಾವಧಿ ಪ್ರಾರಂಭವಾಗಲಿದೆ. ಆದ್ದರಿಂದ, ಸಮಿತಿ ಸಭೆ ನಡೆಸಿದ 2021ರ ಏಪ್ರಿಲ್ 26ರ ದಿನವನ್ನು ಪರಿಗಣಿಸಿ ಮೂರು ವರ್ಷಗಳ ಅವಧಿಗೆ ಅಂದರೆ, 2024ರ ಏಪ್ರಿಲ್ 26ರ ವರೆಗೂ ಕಾಲಾವಧಿ ಇರಲಿದೆ. ಹೀಗಾಗಿ, 2020ರ ಅಕ್ಟೋಬರ್ 27ರಂದು ಮೂರು ವರ್ಷಗಳ ಅವಧಿಗೆ ಸಮಿತಿಯನ್ನು ರಚನೆ ಮಾಡಿ ಆದೇಶಿಸಿರುವ ಧಾರ್ಮಿಕ ದತ್ತಿ ಇಲಾಖೆ ಆದೇಶ ರದ್ದುಪಡಿಸಬೇಕು ಅಥವಾ ಮಾರ್ಪಾಡು ಮಾಡಬೇಕು‘ ಎಂದು ಕೋರಿ ಸದಸ್ಯರಾದ ಕೆರಾಡಿ ಚಂದ್ರಶೇಖರ ಶೆಟ್ಟಿ, ಅತುಲ್ ಕುಮಾರ್ ಶೆಟ್ಟಿ, ರತ್ನಾ, ಎಚ್.ಜಯನಂದ, ಕೆ.ರಾಮಚಂದ್ರ ಅಡಿಗ, ಗೋಪಾಲಕೃಷ್ಣ ಅರ್ಜಿ ಸಲ್ಲಿಸಿದ್ದರು.