ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೆಪಿಟಿಸಿಎಲ್‌, ಎಸ್ಕಾಂ | ಪಿಂಚಣಿ ಹೊರೆ: ಗ್ರಾಹಕರಿಗೆ ಬರೆ

ಕೆಪಿಟಿಸಿಎಲ್‌, ಎಸ್ಕಾಂಗಳ ಭಾರ ಬಳಕೆದಾರರ ಜೇಬಿಗೆ l ಕೃಷಿ ಪಂಪ್‌ಸೆಟ್‌ಗೂ ಅನ್ವಯ
Published : 19 ಮಾರ್ಚ್ 2025, 23:30 IST
Last Updated : 19 ಮಾರ್ಚ್ 2025, 23:30 IST
ಫಾಲೋ ಮಾಡಿ
Comments
₹4,659 ಕೋಟಿ ಹಿಂಬಾಕಿ:
ಪಿಂಚಣಿ ಮತ್ತು ಗ್ರಾಚ್ಯುಟಿಯ ರಾಜ್ಯ ಸರ್ಕಾರದ ಪಾಲನ್ನು ಭರಿಸಲು ಮುಂದಿನ ಮೂರು ಆರ್ಥಿಕ ವರ್ಷಗಳಲ್ಲಿ ವಿದ್ಯುತ್‌ ಬಳಕೆದಾರರಿಂದ ₹8,519.55 ಕೋಟಿ ಮೊತ್ತವನ್ನು ವಸೂಲಿ ಮಾಡಲು ಕೆಇಆರ್‌ಸಿ ಸಮ್ಮತಿಸಿದೆ. ಈ ಪೈಕಿ 2021–22ರಿಂದ 2024–25ನೇ ಆರ್ಥಿಕ ವರ್ಷಗಳವರೆಗಿನ ಹಿಂಬಾಕಿ ಮೊತ್ತವೇ ₹4,659.34 ಕೋಟಿಯಷ್ಟಿದೆ. ಹಿಂಬಾಕಿ ಮೊತ್ತವನ್ನು 2025–26ರಿಂದ 2030–31ನೇ ಆರ್ಥಿಕ ವರ್ಷದವರೆಗೆ ಆರು ವಾರ್ಷಿಕ ಕಂತುಗಳಲ್ಲಿ ತಲಾ ₹776.56 ಕೋಟಿಯಷ್ಟನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತದೆ.
ದರ ಪರಿಷ್ಕರಣೆಯೂ ಬಾಕಿ
ಮುಂದಿನ ಮೂರು ವರ್ಷಗಳಿಗೆ ವಿದ್ಯುತ್‌ ದರ ಪರಿಷ್ಕರಣೆ ಕೋರಿ ಕೆಪಿಟಿಸಿಎಲ್‌ ಮತ್ತು ವಿದ್ಯುತ್‌ ಸರಬರಾಜು ಕಂಪನಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ನಡೆಸುತ್ತಿದೆ. ಈ ಅರ್ಜಿಗಳ ಕುರಿತು ಸಾರ್ವಜನಿಕ ವಿಚಾರಣೆಗಳನ್ನು ಆಯೋಗ ಪೂರ್ಣಗೊಳಿಸಿದ್ದು, ಏಪ್ರಿಲ್‌ 1ರೊಳಗೆ ಆದೇಶ ಪ್ರಕಟಿಸಬೇಕಿದೆ. ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳ ಬೇಡಿಕೆಯನ್ನು ಕೆಇಆರ್‌ಸಿ ಪುರಸ್ಕರಿಸಿದರೆ ಗ್ರಾಹಕರ ಮೇಲೆ ಮತ್ತೊಮ್ಮೆ ದರ ಏರಿಕೆಯ ಹೊರ ಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT