ಅರಕಲಗೂಡು: ಅ.ನ.ಕೃ ಹೆಸರಿನಲ್ಲಿ ನೀಡುವ ಅನಕೃ ಪ್ರಶಸ್ತಿಗೆ ‘ನಿತ್ಯೋತ್ಸವ’ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪತ್ರ, ಫಲಕ ನೀಡಿ ಗೌರವಿಸಲಾಗುತ್ತದೆ.
ಮಾರ್ಚ್ 7ರಂದು ನಡೆಯುವ ಅನಕೃ ಸಾಹಿತ್ಯ ಸಂಭ್ರಮ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಷ್ಣುಪ್ರಕಾಶ್ ಸೋಮವಾರ ತಿಳಿಸಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡುವರು. ಸಂಗೀತ ವಿದ್ವಾಂಸರಾದ ಆರ್.ಎನ್.ತ್ಯಾಗರಾಜನ್, ಆರ್.ಜಿ.ತಾರಾನಾಥನ್, ಪ್ರಗತಿಪರ ಕೃಷಿಕ ಎಂ.ಸಿ.ರಂಗಸ್ವಾಮಿ ಅವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.