ಬೆಂಗಳೂರು: ಕೋವಿಡ್–19 ಹರಡದಂತೆ ತಡೆಯಲು ಲಾಕ್ಡೌನ್ ಘೋಷಿಸಿದ ನಂತರ ಕೆಎಸ್ಆರ್ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಈವರೆಗೆ ಸಂಸ್ಥೆಯ ವರಮಾನದಲ್ಲಿ ₹182 ಕೋಟಿ ಖೋತಾ ಆಗಿದೆ ಎಂದು ಅಂದಾಜಿಸಲಾಗಿದೆ.
746 ಐಷಾರಾಮಿ ಬಸ್ಗಳು, 7,364 ಸಾಮಾನ್ಯ ಬಸ್ಗಳು ಪ್ರಯಾಣಿಕರನ್ನು ಹೊತ್ತು ದಿನಕ್ಕೆ 30,11,786 ಕಿಲೋ ಮೀಟರ್ ಸಂಚರಿಸುತ್ತಿದ್ದವು. ಸಂಚಾರ ಸ್ಥಗಿತಗೊಂಡಿರುವ ಕಾರಣ ದಿನಕ್ಕೆ ₹9.87 ಕೋಟಿ ವರಮಾನ ಖೋತಾ ಆಗಿದೆ ಎಂದು ಕೆಎಸ್ಆರ್ಟಿಸಿ ಅಂದಾಜಿಸಿದೆ.
ಲಾಕ್ಡೌನ್ ಘೋಷಣೆಗೆ ಮುನ್ನವೂ ಐಷಾರಾಮಿ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಮಾರ್ಚ್ 1ರಿಂದ ಈವರೆಗೆ ಐಷಾರಾಮಿ ಬಸ್ಗಳಿಂದ ₹37.28 ಕೋಟಿ, ಸಾಮಾನ್ಯ ಬಸ್ಗಳಿಂದ ₹144 ಕೋಟಿ ವರಮಾನ ಬರುತ್ತಿತ್ತು ಎಂದು ನಿಗಮ ಅಂದಾಜಿಸಿದೆ.