ಟೀಚರ್ ಜತೆ ಪ್ರಯಾಣ: ದಾವಣಗೆರೆ–ಭರಮಸಾಗರ ಬಸ್ನಲ್ಲಿ ನಿತ್ಯವೂ ಪ್ರಯಾಣಿಸುವ ಶಿಕ್ಷಕರೊಬ್ಬರ ಜತೆಯಲ್ಲಿ ಹನುಮಾನ್ ಲಂಗೂರ್ ಕೂಡ ಇರುತ್ತದೆ. ಆ ದಿನ ಚಾಲಕನ ಸೀಟ್ನತ್ತ ಜಿಗಿದ ಲಂಗೂರ್, ಸ್ಟೇರಿಂಗ್ ಬಿಟ್ಟು ಬರಲು ವಿರೋಧ ತೋರಿದೆ. ಪ್ರಯಾಣಿಕರು ಎಷ್ಟೇ ಪ್ರಯತ್ನಿಸಿದರೂ ಕೋತಿ ಸ್ಟೇರಿಂಗ್ ಬಿಟ್ಟು ಬಂದಿಲ್ಲ. ಪ್ರಾಣಿಪ್ರಿಯನಾದ ಚಾಲಕ ಪ್ರಕಾಶ್, ಅದನ್ನು ಕುಳಿತುಕೊಳ್ಳಲು ಬಿಟ್ಟು ಚಾಲನೆ ಮುಂದುವರಿಸಿದ್ದಾರೆ. ಆದರೆ, 3–4 ನಿಮಿಷಗಳಲ್ಲಿ ಮುಂದಿನ ನಿಲ್ದಾಣ ಬರುತ್ತಿದ್ದಂತೆ ಕೋತಿ ಇಳಿದು ಹೋಗಿದೆ. ಈ ಬಗ್ಗೆ ಪ್ರಯಾಣಿಕರಿಂದ ಯಾವುದೇ ದೂರು ಬಂದಿಲ್ಲ ಎಂದು ದಾವಣಗೆರೆ ಕೆಎಸ್ಆರ್ಟಿಸಿ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.