ಸಂಘರ್ಷ ಸರಿಯಾಗಿ ನಿಭಾಯಿಸಬೇಕು: ಮುಖ್ಯಮಂತ್ರಿ
‘ಯಾವ ರಾಜ್ಯಗಳಲ್ಲಿ ಆನೆ– ಮಾನವ ಸಂಘರ್ಷ ಇದೆಯೋ, ಅದನ್ನು ಒಗ್ಗಟ್ಟಾಗಿ ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಆಂಧ್ರಪ್ರದೇಶಕ್ಕೆ ಆರು ಆನೆಗಳನ್ನು ನೀಡಲು ಒಪ್ಪಿಕೊಂಡಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು(6,395) ಆನೆಗಳಿವೆ. ಅಗತ್ಯಕ್ಕಿಂತ ಹೆಚ್ಚೇ ಇದೆ. ಹಿಂದೆಯೂ ಬೇರೆ ರಾಜ್ಯಗಳಿಗೆ ಆನೆ ನೀಡಿದ್ದೆವು. ರಾಜ್ಯಗಳ ಮಧ್ಯೆ ಪರಸ್ಪರ ಸಹಕಾರ ಇದ್ದರೆ ಸಂಘರ್ಷ ಕಡಿಮೆ ಮಾಡಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.