ಎಲ್.ನಾರಾಯಣಸ್ವಾಮಿ ಚಿತ್ರದುರ್ಗ ಜಿಲ್ಲೆಯವರು. 1959ರ ಜು.1ರಂದು ಜನಿಸಿದ ಅವರು, 1987ರಲ್ಲಿ ವಕೀಲ ವೃತ್ತಿ ಆರಂಭಿಸಿದರು. ಹೈಕೋರ್ಟ್ನಲ್ಲಿ ಭೂ ಕಂದಾಯ, ಸೇವಾ ವಿಷಯಗಳು ಸೇರಿ ಹಲವು ವಿಷಯಗಳಲ್ಲಿ ನೈಪುಣ್ಯತೆ ಹೊಂದಿದ್ದರು. 2007ರಲ್ಲಿ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2009ರಲ್ಲಿ ಅವರ ಸೇವೆ ಕಾಯಂ ಆಗಿತ್ತು. 2019ರ ಆರಂಭದಲ್ಲಿ ಐದು ತಿಂಗಳ ಕಾಲ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿಯೂ ಅವರು ಕೆಲಸ ಮಾಡಿದ್ದರು.