<p><strong>ಬಾಗಲಕೋಟೆ:</strong> ರಾಜ್ಯದಲ್ಲಿ ಕೆರೆ ಸಂರಕ್ಷಣಾ ಪ್ರಾಧಿಕಾರ ರಚನೆಯಾಗಿ 10 ವರ್ಷಗಳಾಗಿವೆ. ಆದರೆ, ಇನ್ನೂ 12,246 ಕೆರೆಗಳ ಒತ್ತುವರಿ ಸರ್ವೆ ಕಾರ್ಯ ಪೂರ್ಣವಾಗಿಲ್ಲ. ಈಗಾಗಲೇ ಸರ್ವೆ ಆದ ಕೆರೆಗಳ ಪೈಕಿ 5,559 ಕೆರೆಗಳ ಒತ್ತುವರಿ ತೆರವು ಆಗಿಲ್ಲ.</p>.<p>ರಾಜ್ಯದಲ್ಲಿ 40,998 ಕೆರೆಗಳಿವೆ. 7.36 ಲಕ್ಷ ಎಕರೆ ವಿಸ್ತೀರ್ಣ ಹೊಂದಿವೆ. ಈವರೆಗೆ 28,752 ಕೆರೆಗಳ ಸರ್ವೆ ಆಗಿದೆ. ಅದರಲ್ಲಿ 11,059 ಕೆರೆಗಳ 34,941 ಎಕರೆ ಜಾಗ ಒತ್ತುವರಿಯಾಗಿದೆ. 16,973 ಎಕರೆ ಜಾಗ ತೆರವು ಆಗಿದೆ.</p>.<p>ಕೆರೆಗಳ ಒತ್ತುವರಿ ಕುರಿತು 2012ರಲ್ಲಿ ಅರ್ಜಿಯೊಂದರ ವಿಚಾರಣೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಕೆರೆಗಳ ಸಂರಕ್ಷಣೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು. ಆ ಸೂಚನೆ ಮೇರೆಗೆ 2014ರಲ್ಲಿ ಕರ್ನಾಟಕ ಕೆರೆ ಸಂರಕ್ಷಣಾ ಪ್ರಾಧಿಕಾರ ರಚಿಸಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ.</p>.<p>ರಾಜ್ಯದ 15 ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡರೂ ತೆರವು ಕಾರ್ಯ ಯಾವ ಜಿಲ್ಲೆಯಲ್ಲೂ ಪೂರ್ಣವಾಗಿಲ್ಲ. ಉಡುಪಿಯಲ್ಲಿ ಕೇವಲ 2 ಎಕರೆ ಮತ್ತು ಯಾದಗಿರಿಯಲ್ಲಿ 3 ಎಕರೆ ತೆರವು ಮಾತ್ರ ಬಾಕಿ ಇದೆ.</p>.<p><strong>ಸರ್ವೆಯರ್ಗಳ ಕೊರತೆ:</strong> ಸರ್ವೆಯರ್ಗಳ ಕೊರತೆಯಿಂದ ನಿಗದಿತ ಸಮಯದಲ್ಲಿ ಕೆರೆಗಳ ಸರ್ವೆ ಕಾರ್ಯ ಪೂರ್ಣ ಆಗುತ್ತಿಲ್ಲ. ಹೊಲ, ನಿವೇಶನಗಳ ಸರ್ವೆಗೆ ಸಲ್ಲಿಸುವ ಅರ್ಜಿಗಳ ಜೊತೆಗೆ ಇವುಗಳನ್ನೂ ನಿಭಾಯಿಸಬೇಕಿದೆ.</p>.<p>‘ಸರ್ವೆ ಕಾರ್ಯ ಒಂದೆಡೆ ಮಂದಗತಿಯಲ್ಲಿ ನಡೆದರೆ, ಇನ್ನೊಂದೆಡೆ ಕೆರೆಗಳು ಮತ್ತೆ ಒತ್ತುವರಿ ಆಗುತ್ತಿವೆ. ಅದನ್ನು ತಪ್ಪಿಸಲು ಗಡಿ ಕಲ್ಲು ಹಾಕಿ, ಟ್ರೆಂಚ್ ನಿರ್ಮಿಸಲಾಗಿದೆ. ಕೆಲವೆಡೆ ಚೈನ್ ಲಿಂಕ್ ಫೆನ್ಸಿಂಗ್ ಸಹ ಹಾಕಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು.</p>.<p>‘ಕೆರೆಗಳ ಸಂರಕ್ಷಣೆ ಕುರಿತು ನಿಯಮಿತವಾಗಿ ಸಭೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲ ಕೆರೆಗಳ ಸರ್ವೆ ಕಾರ್ಯ ಪೂರ್ಣವಾಗಿದೆ. ಒತ್ತುವರಿ ತೆರವು ಸಹ ಪ್ರಗತಿಯಲ್ಲಿದೆ’ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.</p>.<div><blockquote>ಕೆರೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ. ಪೊಲೀಸ್ ಸಿಬ್ಬಂದಿ ನೆರವು ಅವಶ್ಯವಿದ್ದರೆ, ನೀಡಲು ಜಿಲ್ಲಾಡಳಿತ ಸಿದ್ಧವಿದೆ. </blockquote><span class="attribution">-ಜಾನಕಿ ಕೆ.ಎಂ, ಜಿಲ್ಲಾಧಿಕಾರಿ, ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ರಾಜ್ಯದಲ್ಲಿ ಕೆರೆ ಸಂರಕ್ಷಣಾ ಪ್ರಾಧಿಕಾರ ರಚನೆಯಾಗಿ 10 ವರ್ಷಗಳಾಗಿವೆ. ಆದರೆ, ಇನ್ನೂ 12,246 ಕೆರೆಗಳ ಒತ್ತುವರಿ ಸರ್ವೆ ಕಾರ್ಯ ಪೂರ್ಣವಾಗಿಲ್ಲ. ಈಗಾಗಲೇ ಸರ್ವೆ ಆದ ಕೆರೆಗಳ ಪೈಕಿ 5,559 ಕೆರೆಗಳ ಒತ್ತುವರಿ ತೆರವು ಆಗಿಲ್ಲ.</p>.<p>ರಾಜ್ಯದಲ್ಲಿ 40,998 ಕೆರೆಗಳಿವೆ. 7.36 ಲಕ್ಷ ಎಕರೆ ವಿಸ್ತೀರ್ಣ ಹೊಂದಿವೆ. ಈವರೆಗೆ 28,752 ಕೆರೆಗಳ ಸರ್ವೆ ಆಗಿದೆ. ಅದರಲ್ಲಿ 11,059 ಕೆರೆಗಳ 34,941 ಎಕರೆ ಜಾಗ ಒತ್ತುವರಿಯಾಗಿದೆ. 16,973 ಎಕರೆ ಜಾಗ ತೆರವು ಆಗಿದೆ.</p>.<p>ಕೆರೆಗಳ ಒತ್ತುವರಿ ಕುರಿತು 2012ರಲ್ಲಿ ಅರ್ಜಿಯೊಂದರ ವಿಚಾರಣೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಕೆರೆಗಳ ಸಂರಕ್ಷಣೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು. ಆ ಸೂಚನೆ ಮೇರೆಗೆ 2014ರಲ್ಲಿ ಕರ್ನಾಟಕ ಕೆರೆ ಸಂರಕ್ಷಣಾ ಪ್ರಾಧಿಕಾರ ರಚಿಸಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ.</p>.<p>ರಾಜ್ಯದ 15 ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡರೂ ತೆರವು ಕಾರ್ಯ ಯಾವ ಜಿಲ್ಲೆಯಲ್ಲೂ ಪೂರ್ಣವಾಗಿಲ್ಲ. ಉಡುಪಿಯಲ್ಲಿ ಕೇವಲ 2 ಎಕರೆ ಮತ್ತು ಯಾದಗಿರಿಯಲ್ಲಿ 3 ಎಕರೆ ತೆರವು ಮಾತ್ರ ಬಾಕಿ ಇದೆ.</p>.<p><strong>ಸರ್ವೆಯರ್ಗಳ ಕೊರತೆ:</strong> ಸರ್ವೆಯರ್ಗಳ ಕೊರತೆಯಿಂದ ನಿಗದಿತ ಸಮಯದಲ್ಲಿ ಕೆರೆಗಳ ಸರ್ವೆ ಕಾರ್ಯ ಪೂರ್ಣ ಆಗುತ್ತಿಲ್ಲ. ಹೊಲ, ನಿವೇಶನಗಳ ಸರ್ವೆಗೆ ಸಲ್ಲಿಸುವ ಅರ್ಜಿಗಳ ಜೊತೆಗೆ ಇವುಗಳನ್ನೂ ನಿಭಾಯಿಸಬೇಕಿದೆ.</p>.<p>‘ಸರ್ವೆ ಕಾರ್ಯ ಒಂದೆಡೆ ಮಂದಗತಿಯಲ್ಲಿ ನಡೆದರೆ, ಇನ್ನೊಂದೆಡೆ ಕೆರೆಗಳು ಮತ್ತೆ ಒತ್ತುವರಿ ಆಗುತ್ತಿವೆ. ಅದನ್ನು ತಪ್ಪಿಸಲು ಗಡಿ ಕಲ್ಲು ಹಾಕಿ, ಟ್ರೆಂಚ್ ನಿರ್ಮಿಸಲಾಗಿದೆ. ಕೆಲವೆಡೆ ಚೈನ್ ಲಿಂಕ್ ಫೆನ್ಸಿಂಗ್ ಸಹ ಹಾಕಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು.</p>.<p>‘ಕೆರೆಗಳ ಸಂರಕ್ಷಣೆ ಕುರಿತು ನಿಯಮಿತವಾಗಿ ಸಭೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲ ಕೆರೆಗಳ ಸರ್ವೆ ಕಾರ್ಯ ಪೂರ್ಣವಾಗಿದೆ. ಒತ್ತುವರಿ ತೆರವು ಸಹ ಪ್ರಗತಿಯಲ್ಲಿದೆ’ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.</p>.<div><blockquote>ಕೆರೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ. ಪೊಲೀಸ್ ಸಿಬ್ಬಂದಿ ನೆರವು ಅವಶ್ಯವಿದ್ದರೆ, ನೀಡಲು ಜಿಲ್ಲಾಡಳಿತ ಸಿದ್ಧವಿದೆ. </blockquote><span class="attribution">-ಜಾನಕಿ ಕೆ.ಎಂ, ಜಿಲ್ಲಾಧಿಕಾರಿ, ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>