<p><strong>ಮಂಗಳೂರು</strong>: ಲಾಕ್ಡೌನ್ನಿಂದಾಗಿ ಜಿಲ್ಲೆಯಾದ್ಯಂತ ಮೇವಿನ ಕೊರತೆ ಎದುರಾಗಿದೆ. ಜಾನುವಾರುಗಳು ಸೊರಗುತ್ತಿವೆ. ಇನ್ನೊಂದೆಡೆ ಗೋಶಾಲೆಗಳು ಕೂಡಾ ಅಷ್ಟಿಷ್ಟು ಮೇವು ತರಿಸಿಕೊಂಡು, ಸಂಕಷ್ಟದಲ್ಲಿಯೇ ದಿನಗಳನ್ನು ದೂಡುವಂತಾಗಿದೆ.</p>.<p>ಹೊರವಲಯದ ಕೈರಂಗಳದಲ್ಲಿ ಗೋವನಿತಾಶ್ರಯ ಟ್ರಸ್ಟ್ ನಡೆಸುತ್ತಿರುವ ಗೋಶಾಲೆಗೂ ಮೇವು ಕೊರತೆ ಬಾಧಿಸಿದೆ. ಹೊರಜಿಲ್ಲೆಗಳಿಂದ ಮೇವು ತರಿಸುವುದಕ್ಕೂ ಹರಸಾಹಸ ಪಡಬೇಕಾಗಿದೆ.</p>.<p>‘ಇಲ್ಲಿ 360 ಜಾನುವಾರುಗಳಿವೆ. ಸಿಬ್ಬಂದಿ ವೇತನ, ಮೇವು, ಜಾನುವಾರು ಚಿಕಿತ್ಸೆ ಹೀಗೆ ಮಾಸಿಕ ₹ 8 ಲಕ್ಷ ವೆಚ್ಚವಾಗುತ್ತಿದೆ. ಸದ್ಯ ದೇಣಿಗೆ ಸಂಗ್ರಹವಾಗುತ್ತಿಲ್ಲ. ಸ್ಥಳೀಯವಾಗಿ ಮೇವು ಕೂಡಾ ಲಭ್ಯವಿಲ್ಲ’ ಎಂದು ಟ್ರಸ್ಟ್ನ ಕಾರ್ಯದರ್ಶಿ ಡಾ.ಪಿ.ಅನಂತಕೃಷ್ಣ ಭಟ್ ಮಾಹಿತಿ ನೀಡಿದರು.</p>.<p>ಹೊರಜಿಲ್ಲೆಗಳಿಂದ ಮೇವು ತರಿಸುವುದಕ್ಕೂ ಸಾಕಷ್ಟು ಅಡ್ಡಿಗಳಿವೆ. ಮೇವು ಸಾಗಣೆಗೆ ಅನುಮತಿ ಪಡೆಯುವುದು, ಮೇವಿಗೆ ಹಣ ನೀಡುವುದು ಹೀಗೆ ತೊಡಕುಗಳಿವೆ. ಗೋಶಾಲೆ ನಡೆಸಲು ಹಣ ಹೊಂದಿಸುವ ಚಿಂತೆ ಕಾಡುತ್ತಿದೆ‘ ಎನ್ನುತ್ತಾರೆ ಅವರು.</p>.<p><strong>‘ಸರ್ಕಾರವೇ ಭರಿಸಲಿ’:</strong>‘ಗೋ ಸಾಗಣೆ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ಗೋಶಾಲೆಗಳಿಗೆ ಕಳುಹಿಸಲಾಗುತ್ತದೆ. ದೇಣಿಗೆ ಸಂಪೂರ್ಣ ನಿಂತುಹೋಗಿರುವ ಈಗಿನ ಸಂದರ್ಭದಲ್ಲಿ ಗೋಶಾಲೆಗಳಲ್ಲಿನ ಜಾನುವಾರು ಸಾಕಣೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು’ ಎಂದು ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ವಿನಯ್ ಎಲ್.ಶೆಟ್ಟಿ ಆಗ್ರಹಿಸಿದ್ದಾರೆ.</p>.<p><strong>‘ಬಸವ’ಗಳಿಗೂ ಬರ</strong>: ಬಸವಗಳೊಂದಿಗೆ ಮನೆ ಮನೆಗೆ ತಿರುಗಿ ಹೊಟ್ಟೆ ತುಂಬಿಸಿಕೊಳ್ಳುವವರಿಗೂ ಲಾಕ್ಡೌನ್ ಬಿಸಿ ತಟ್ಟಿದೆ.ಬಸವವನ್ನು ಬದುಕಿಗೆ ಆಶ್ರಯಿಸಿರುವ ಕೊಂಡಣ್ಣ ಅವರು, ‘ಈಗ ಮೇವು ಸಿಗುತ್ತಿಲ್ಲ. . ಬಸವಗಳೂ ಬಸವಳಿಯುತ್ತಿವೆ. ನಮ್ಮ ಉಪಜೀವನಕ್ಕೂ ತೊಂದರೆ ಆಗಿದೆ’ ಎಂದರು.</p>.<p>**</p>.<p>ಜಿಲ್ಲೆಯಲ್ಲಿ ಗದ್ದೆ ಬೇಸಾಯ ಕಡಿಮೆಯಾಗಿದೆ. ಹೀಗಾಗಿ ಹೊರ ಜಿಲ್ಲೆಗಳಿಂದಲೇ ಮೇವು ತರಿಸಿಕೊಳ್ಳಬೇಕು. ಲಾಕ್ಡೌನ್ನಿಂದಾಗಿ ಅದಕ್ಕೂ ತೊಂದರೆ ಉಂಟಾಗಿದೆ.<br /><em><strong>-ಪಿ. ಅನಂತಕೃಷ್ಣ ಭಟ್,</strong></em><em><strong>ಗೋವನಿತಾಶ್ರಯ ಟ್ರಸ್ಟ್ ಕಾರ್ಯದರ್ಶಿ</strong></em></p>.<p><em><strong>**</strong></em><br />ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇವಿನ ಕೊರತೆ ಇದ್ದು, ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಶೀಘ್ರ ಹೊರಜಿಲ್ಲೆಗಳಿಂದ ಮೇವು ತರಿಸಲು ಕ್ರಮ ಕೈಗೊಳ್ಳಲಾಗುವುದು.<br /><em><strong>-ಡಾ.ಜಯರಾಜ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಲಾಕ್ಡೌನ್ನಿಂದಾಗಿ ಜಿಲ್ಲೆಯಾದ್ಯಂತ ಮೇವಿನ ಕೊರತೆ ಎದುರಾಗಿದೆ. ಜಾನುವಾರುಗಳು ಸೊರಗುತ್ತಿವೆ. ಇನ್ನೊಂದೆಡೆ ಗೋಶಾಲೆಗಳು ಕೂಡಾ ಅಷ್ಟಿಷ್ಟು ಮೇವು ತರಿಸಿಕೊಂಡು, ಸಂಕಷ್ಟದಲ್ಲಿಯೇ ದಿನಗಳನ್ನು ದೂಡುವಂತಾಗಿದೆ.</p>.<p>ಹೊರವಲಯದ ಕೈರಂಗಳದಲ್ಲಿ ಗೋವನಿತಾಶ್ರಯ ಟ್ರಸ್ಟ್ ನಡೆಸುತ್ತಿರುವ ಗೋಶಾಲೆಗೂ ಮೇವು ಕೊರತೆ ಬಾಧಿಸಿದೆ. ಹೊರಜಿಲ್ಲೆಗಳಿಂದ ಮೇವು ತರಿಸುವುದಕ್ಕೂ ಹರಸಾಹಸ ಪಡಬೇಕಾಗಿದೆ.</p>.<p>‘ಇಲ್ಲಿ 360 ಜಾನುವಾರುಗಳಿವೆ. ಸಿಬ್ಬಂದಿ ವೇತನ, ಮೇವು, ಜಾನುವಾರು ಚಿಕಿತ್ಸೆ ಹೀಗೆ ಮಾಸಿಕ ₹ 8 ಲಕ್ಷ ವೆಚ್ಚವಾಗುತ್ತಿದೆ. ಸದ್ಯ ದೇಣಿಗೆ ಸಂಗ್ರಹವಾಗುತ್ತಿಲ್ಲ. ಸ್ಥಳೀಯವಾಗಿ ಮೇವು ಕೂಡಾ ಲಭ್ಯವಿಲ್ಲ’ ಎಂದು ಟ್ರಸ್ಟ್ನ ಕಾರ್ಯದರ್ಶಿ ಡಾ.ಪಿ.ಅನಂತಕೃಷ್ಣ ಭಟ್ ಮಾಹಿತಿ ನೀಡಿದರು.</p>.<p>ಹೊರಜಿಲ್ಲೆಗಳಿಂದ ಮೇವು ತರಿಸುವುದಕ್ಕೂ ಸಾಕಷ್ಟು ಅಡ್ಡಿಗಳಿವೆ. ಮೇವು ಸಾಗಣೆಗೆ ಅನುಮತಿ ಪಡೆಯುವುದು, ಮೇವಿಗೆ ಹಣ ನೀಡುವುದು ಹೀಗೆ ತೊಡಕುಗಳಿವೆ. ಗೋಶಾಲೆ ನಡೆಸಲು ಹಣ ಹೊಂದಿಸುವ ಚಿಂತೆ ಕಾಡುತ್ತಿದೆ‘ ಎನ್ನುತ್ತಾರೆ ಅವರು.</p>.<p><strong>‘ಸರ್ಕಾರವೇ ಭರಿಸಲಿ’:</strong>‘ಗೋ ಸಾಗಣೆ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ಗೋಶಾಲೆಗಳಿಗೆ ಕಳುಹಿಸಲಾಗುತ್ತದೆ. ದೇಣಿಗೆ ಸಂಪೂರ್ಣ ನಿಂತುಹೋಗಿರುವ ಈಗಿನ ಸಂದರ್ಭದಲ್ಲಿ ಗೋಶಾಲೆಗಳಲ್ಲಿನ ಜಾನುವಾರು ಸಾಕಣೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು’ ಎಂದು ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ವಿನಯ್ ಎಲ್.ಶೆಟ್ಟಿ ಆಗ್ರಹಿಸಿದ್ದಾರೆ.</p>.<p><strong>‘ಬಸವ’ಗಳಿಗೂ ಬರ</strong>: ಬಸವಗಳೊಂದಿಗೆ ಮನೆ ಮನೆಗೆ ತಿರುಗಿ ಹೊಟ್ಟೆ ತುಂಬಿಸಿಕೊಳ್ಳುವವರಿಗೂ ಲಾಕ್ಡೌನ್ ಬಿಸಿ ತಟ್ಟಿದೆ.ಬಸವವನ್ನು ಬದುಕಿಗೆ ಆಶ್ರಯಿಸಿರುವ ಕೊಂಡಣ್ಣ ಅವರು, ‘ಈಗ ಮೇವು ಸಿಗುತ್ತಿಲ್ಲ. . ಬಸವಗಳೂ ಬಸವಳಿಯುತ್ತಿವೆ. ನಮ್ಮ ಉಪಜೀವನಕ್ಕೂ ತೊಂದರೆ ಆಗಿದೆ’ ಎಂದರು.</p>.<p>**</p>.<p>ಜಿಲ್ಲೆಯಲ್ಲಿ ಗದ್ದೆ ಬೇಸಾಯ ಕಡಿಮೆಯಾಗಿದೆ. ಹೀಗಾಗಿ ಹೊರ ಜಿಲ್ಲೆಗಳಿಂದಲೇ ಮೇವು ತರಿಸಿಕೊಳ್ಳಬೇಕು. ಲಾಕ್ಡೌನ್ನಿಂದಾಗಿ ಅದಕ್ಕೂ ತೊಂದರೆ ಉಂಟಾಗಿದೆ.<br /><em><strong>-ಪಿ. ಅನಂತಕೃಷ್ಣ ಭಟ್,</strong></em><em><strong>ಗೋವನಿತಾಶ್ರಯ ಟ್ರಸ್ಟ್ ಕಾರ್ಯದರ್ಶಿ</strong></em></p>.<p><em><strong>**</strong></em><br />ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇವಿನ ಕೊರತೆ ಇದ್ದು, ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಶೀಘ್ರ ಹೊರಜಿಲ್ಲೆಗಳಿಂದ ಮೇವು ತರಿಸಲು ಕ್ರಮ ಕೈಗೊಳ್ಳಲಾಗುವುದು.<br /><em><strong>-ಡಾ.ಜಯರಾಜ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>