ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು, ‘ಸದ್ಯದ ಚುನಾವಣೆ ಪ್ರಚಾರದ ಗುಣಮಟ್ಟ ಕಳಪೆಯಾಗುತ್ತಿದೆ. ರಾಜಕಾರಣಿಗಳು ತಮ್ಮ ಭಾಷಣದ ವೇಳೆ ಭಾಷೆಯ ಮೇಲೆ ಕಾಳಜಿ ವಹಿಸಿ ಮಾತನಾಡಬೇಕು. ಇಂದು ಡಿಜಿಟಲ್ ಕ್ರಾಂತಿಯಾಗಿರುವಾಗ ಯಾರು ಏನು ಮಾತನಾಡುತ್ತಾರೆ ಎಂಬುದನ್ನು ತಿಳಿಯಲು ಕಷ್ಪಪಡಬೇಕಿಲ್ಲ, ದೇಶದ ಮತ್ತು ಸಮಾಜದ ಕಳಕಳಿಯಿಂದ ವರ್ತಿಸಬೇಕು’ ಎಂದು ಕಿವಿಮಾತು ಹೇಳಿ ಎಫ್ಐಆರ್ಗೆ ತಡೆ ನೀಡಿ ಆದೇಶಿಸಿದರು.