<p><strong>ಬೆಂಗಳೂರು</strong>: ‘ಕರ್ನಾಟಕದ ಬೇರೆ–ಬೇರೆ ಜಿಲ್ಲೆಗಳಲ್ಲಿ ಆದಿ ಕರ್ನಾಟಕ (ಎ.ಕೆ), ಆದಿ ದ್ರಾವಿಡ (ಎ.ಡಿ) ಮತ್ತು ಆದಿ ಆಂಧ್ರ (ಎ.ಎ) ಸಮುದಾಯಗಳನ್ನು ಬೇರೆ–ಬೇರೆ ಜಾತಿ ಸಮುದಾಯಗಳ ಅಡಿಯಲ್ಲಿ ಗುರುತಿಸುತ್ತಿದ್ದು, ಆ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಒತ್ತಾಯಿಸಿದೆ.</p>.<p>ಎಂಆರ್ಎಸ್ಪಿ ರಾಷ್ಟ್ರೀಯ ಅಧ್ಯಕ್ಷ ಮಂದ ಕೃಷ್ಣ ಮಾದಿಗ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದರು.</p>.<p>‘12 ಜಿಲ್ಲೆಗಳಲ್ಲಿ ಈ ಮೂರೂ ಸಮುದಾಯಗಳನ್ನು ಬೇರೆ–ಬೇರೆ ಜಾತಿಗಳ ಅಡಿಯಲ್ಲಿ ಗುರುತಿಸುವ ತಪ್ಪಾಗಿದೆ. ಇದನ್ನು ಸರಿಪಡಿಸಬೇಕು. ಒಂದೇ ನಿರ್ದಿಷ್ಟ ಜಾತಿಯ ಉಪಜಾತಿಗಳು ಎಂದು ಇವುಗಳನ್ನು ಪರಿಗಣಿಸಬೇಕು’ ಎಂದು ಮಂದ ಕೃಷ್ಣ ಮಾದಿಗ ಕೋರಿದರು.</p>.<p>‘ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ನಿರ್ದಿಷ್ಟವಾದ ಅಂಕಿಅಂಶಗಳು ಇದ್ದವು. ಸರ್ಕಾರವು ಅದನ್ನೇ ಬಳಸಬಹುದಿತ್ತು. ಆದರೆ ಸಮೀಕ್ಷೆ ನಡೆಸಿ, ದತ್ತಾಂಶ ಸಂಗ್ರಹಿಸುವಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಆಯೋಗದ ಶಿಫಾರಸನ್ನು ಸರ್ಕಾರ ಒಪ್ಪಿದೆ. ಆದರೆ ಇದನ್ನು ಗಡುವಿನೊಳಗೇ ಮುಗಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಜಾತಿ ವರ್ಗೀಕರಣದ ಸಮಸ್ಯೆ ಮತ್ತು ದತ್ತಾಂಶ ಸಂಗ್ರಹದ ನಂತರವೇ ಒಳಮೀಸಲಾತಿಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಕರ್ನಾಟಕದ ಬೇರೆ–ಬೇರೆ ಜಿಲ್ಲೆಗಳಲ್ಲಿ ಆದಿ ಕರ್ನಾಟಕ (ಎ.ಕೆ), ಆದಿ ದ್ರಾವಿಡ (ಎ.ಡಿ) ಮತ್ತು ಆದಿ ಆಂಧ್ರ (ಎ.ಎ) ಸಮುದಾಯಗಳನ್ನು ಬೇರೆ–ಬೇರೆ ಜಾತಿ ಸಮುದಾಯಗಳ ಅಡಿಯಲ್ಲಿ ಗುರುತಿಸುತ್ತಿದ್ದು, ಆ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಒತ್ತಾಯಿಸಿದೆ.</p>.<p>ಎಂಆರ್ಎಸ್ಪಿ ರಾಷ್ಟ್ರೀಯ ಅಧ್ಯಕ್ಷ ಮಂದ ಕೃಷ್ಣ ಮಾದಿಗ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದರು.</p>.<p>‘12 ಜಿಲ್ಲೆಗಳಲ್ಲಿ ಈ ಮೂರೂ ಸಮುದಾಯಗಳನ್ನು ಬೇರೆ–ಬೇರೆ ಜಾತಿಗಳ ಅಡಿಯಲ್ಲಿ ಗುರುತಿಸುವ ತಪ್ಪಾಗಿದೆ. ಇದನ್ನು ಸರಿಪಡಿಸಬೇಕು. ಒಂದೇ ನಿರ್ದಿಷ್ಟ ಜಾತಿಯ ಉಪಜಾತಿಗಳು ಎಂದು ಇವುಗಳನ್ನು ಪರಿಗಣಿಸಬೇಕು’ ಎಂದು ಮಂದ ಕೃಷ್ಣ ಮಾದಿಗ ಕೋರಿದರು.</p>.<p>‘ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ನಿರ್ದಿಷ್ಟವಾದ ಅಂಕಿಅಂಶಗಳು ಇದ್ದವು. ಸರ್ಕಾರವು ಅದನ್ನೇ ಬಳಸಬಹುದಿತ್ತು. ಆದರೆ ಸಮೀಕ್ಷೆ ನಡೆಸಿ, ದತ್ತಾಂಶ ಸಂಗ್ರಹಿಸುವಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಆಯೋಗದ ಶಿಫಾರಸನ್ನು ಸರ್ಕಾರ ಒಪ್ಪಿದೆ. ಆದರೆ ಇದನ್ನು ಗಡುವಿನೊಳಗೇ ಮುಗಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಜಾತಿ ವರ್ಗೀಕರಣದ ಸಮಸ್ಯೆ ಮತ್ತು ದತ್ತಾಂಶ ಸಂಗ್ರಹದ ನಂತರವೇ ಒಳಮೀಸಲಾತಿಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>