<p><strong>ಪಾಂಡವಪುರ:</strong> ನಾಲೆಗೆ ಬಿದ್ದ ಬಸ್ ಅಪಘಾತದಲ್ಲಿ ಮೃತರಾದ ವದೆಸಮುದ್ರ ಗ್ರಾಮದ 8 ಜನರನ್ನು ಭಾನುವಾರ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಯಿತು.</p>.<p>ರವಿಕುಮಾರ್ (12), ಪ್ರಶಾಂತ್ (13), ಪವಿತ್ರಾ (12) ಹಾಗೂ ರತ್ನಮ್ಮ, ಶಶಿಕಲಾ, ಚಿಕ್ಕಯ್ಯ, ಕಮಲಮ್ಮ, ಕರಿಯಯ್ಯ ಅವರ ಮೃತದೇಹಗಳನ್ನು ಗ್ರಾಮದ ಜಮೀನಿನಲ್ಲಿ ಸಾಲಾಗಿ ಇರಿಸಿ, ಬೆಂಕಿ ಇಡಲಾಯಿತು.</p>.<p>ಮಮ್ಮಲ ಮರುಗಿದ ಗ್ರಾಮಸ್ಥರು ನೊಂದ ಕುಟುಂಬಗಳಿಗೆ ಅಳುತ್ತಲೇ ಸಾಂತ್ವನ ಹೇಳಿದರು. ಇಡೀ ಗ್ರಾಮವೇ ದುಃಖದ ಮಡುವಿನಲ್ಲಿ<br />ಮುಳುಗಿತ್ತು.</p>.<p>‘ಇಂತಹ ದುರಂತ ಸಂಭವಿಸಬಾರದಿತ್ತು. ಎಂಟು ಮಂದಿಯನ್ನು ಕಳೆದುಕೊಂಡ ನಮಗೆ ಊಟ ಸೇರುತ್ತಿಲ್ಲ. ಆ ಡ್ರೈವರ್ ನಮ್ಮೂರಿನ ಜೀವಗಳನ್ನು ಬಲಿ ತೆಗೆದುಕೊಂಡು ಬಿಟ್ಟ’ ಎಂದು ಗ್ರಾಮದ ನಾಗರಾಜು, ರಾಜು, ಶಿವಯ್ಯ, ಮಹದೇವ ಕಣ್ಣೀರಾದರು.</p>.<p><strong>ಹಿಡಿಶಾಪ:</strong> ವದೆಸಮುದ್ರ, ಚಿಕ್ಕಕೊಪ್ಪಲು ಹಾಗೂ ಕನಗನಮರಡಿ ಗ್ರಾಮದ ಜನರು ಖಾಸಗಿ ಬಸ್ಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಭಾಗದಲ್ಲಿ ಸರ್ಕಾರಿ ಬಸ್ಗಳ ಸಂಖ್ಯೆ ಕಡಿಮೆ. ಬೆಳಿಗ್ಗೆ ಮತ್ತು ಸಂಜೆ ಮಾತ್ರ ಸಾರಿಗೆ ಬಸ್ಸು ಬರುತ್ತವೆ. ಉಳಿದಂತೆ ಬಹುತೇಕವಾಗಿ ಖಾಸಗಿ ಬಸ್ಗಳು ಇಲ್ಲಿ ಸಂಚರಿಸುತ್ತವೆ.</p>.<p>‘ಇಲ್ಲಿನ ರಸ್ತೆಗಳು ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಈ ಕಾರಣಗಳಿಂದಲೇ ದುರಂತಗಳು ನಡೆಯುತ್ತಿವೆ. ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಸಾರಿಗೆ ಬಸ್ ವ್ಯವಸ್ಥೆ ಮಾಡುವ ಪ್ರಯತ್ನವನ್ನು ಯಾವ ಜನಪ್ರತಿನಿಧಿಯೂ ಮಾಡುತ್ತಿಲ್ಲ’ ಎಂದು ಈ ಭಾಗದ ಗ್ರಾಮಗಳ ಜನರು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಂಡವಪುರ:</strong> ನಾಲೆಗೆ ಬಿದ್ದ ಬಸ್ ಅಪಘಾತದಲ್ಲಿ ಮೃತರಾದ ವದೆಸಮುದ್ರ ಗ್ರಾಮದ 8 ಜನರನ್ನು ಭಾನುವಾರ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಯಿತು.</p>.<p>ರವಿಕುಮಾರ್ (12), ಪ್ರಶಾಂತ್ (13), ಪವಿತ್ರಾ (12) ಹಾಗೂ ರತ್ನಮ್ಮ, ಶಶಿಕಲಾ, ಚಿಕ್ಕಯ್ಯ, ಕಮಲಮ್ಮ, ಕರಿಯಯ್ಯ ಅವರ ಮೃತದೇಹಗಳನ್ನು ಗ್ರಾಮದ ಜಮೀನಿನಲ್ಲಿ ಸಾಲಾಗಿ ಇರಿಸಿ, ಬೆಂಕಿ ಇಡಲಾಯಿತು.</p>.<p>ಮಮ್ಮಲ ಮರುಗಿದ ಗ್ರಾಮಸ್ಥರು ನೊಂದ ಕುಟುಂಬಗಳಿಗೆ ಅಳುತ್ತಲೇ ಸಾಂತ್ವನ ಹೇಳಿದರು. ಇಡೀ ಗ್ರಾಮವೇ ದುಃಖದ ಮಡುವಿನಲ್ಲಿ<br />ಮುಳುಗಿತ್ತು.</p>.<p>‘ಇಂತಹ ದುರಂತ ಸಂಭವಿಸಬಾರದಿತ್ತು. ಎಂಟು ಮಂದಿಯನ್ನು ಕಳೆದುಕೊಂಡ ನಮಗೆ ಊಟ ಸೇರುತ್ತಿಲ್ಲ. ಆ ಡ್ರೈವರ್ ನಮ್ಮೂರಿನ ಜೀವಗಳನ್ನು ಬಲಿ ತೆಗೆದುಕೊಂಡು ಬಿಟ್ಟ’ ಎಂದು ಗ್ರಾಮದ ನಾಗರಾಜು, ರಾಜು, ಶಿವಯ್ಯ, ಮಹದೇವ ಕಣ್ಣೀರಾದರು.</p>.<p><strong>ಹಿಡಿಶಾಪ:</strong> ವದೆಸಮುದ್ರ, ಚಿಕ್ಕಕೊಪ್ಪಲು ಹಾಗೂ ಕನಗನಮರಡಿ ಗ್ರಾಮದ ಜನರು ಖಾಸಗಿ ಬಸ್ಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಭಾಗದಲ್ಲಿ ಸರ್ಕಾರಿ ಬಸ್ಗಳ ಸಂಖ್ಯೆ ಕಡಿಮೆ. ಬೆಳಿಗ್ಗೆ ಮತ್ತು ಸಂಜೆ ಮಾತ್ರ ಸಾರಿಗೆ ಬಸ್ಸು ಬರುತ್ತವೆ. ಉಳಿದಂತೆ ಬಹುತೇಕವಾಗಿ ಖಾಸಗಿ ಬಸ್ಗಳು ಇಲ್ಲಿ ಸಂಚರಿಸುತ್ತವೆ.</p>.<p>‘ಇಲ್ಲಿನ ರಸ್ತೆಗಳು ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಈ ಕಾರಣಗಳಿಂದಲೇ ದುರಂತಗಳು ನಡೆಯುತ್ತಿವೆ. ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಸಾರಿಗೆ ಬಸ್ ವ್ಯವಸ್ಥೆ ಮಾಡುವ ಪ್ರಯತ್ನವನ್ನು ಯಾವ ಜನಪ್ರತಿನಿಧಿಯೂ ಮಾಡುತ್ತಿಲ್ಲ’ ಎಂದು ಈ ಭಾಗದ ಗ್ರಾಮಗಳ ಜನರು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>