ಟಿಎಸ್ಎಸ್ ಚುನಾವಣೆ ಪ್ರಕ್ರಿಯೆಯಲ್ಲಿ ಲೋಪದೋಷಗಳಾಗಿವೆ ಎಂದು ಚುನಾವಣಾ ತಕರಾರು ಅರ್ಜಿಗಳು ದಾಖಲಾಗಿದ್ದವು. ಆ ವೇಳೆ, ಮಂಜುನಾಥ್ ಸಿಂಗ್ ಅವರು ಕರ್ತವ್ಯಕ್ಕೆ ಹಾಜರಾಗದೇ ಅಜ್ಞಾತ ಸ್ಥಳದಿಂದ ಆದೇಶವೊಂದನ್ನು ಹೊರಡಿಸಿ ಚುನಾವಣಾ ಫಲಿತಾಂಶ ರದ್ದುಪಡಿಸಿದ್ದರು. ಅಲ್ಲದೇ, ಶಿಕ್ಷಣಾಧಿಕಾರಿ ಎಂ.ಎಸ್.ನಾಯ್ಕ ಅವರನ್ನು ವಿಶೇಷಾಧಿಕಾರಿಯನ್ನಾಗಿ ನೇಮಿಸಿದ್ದರು. ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ಆವರು ತಂದಿರಲಿಲ್ಲ.