ಜನಪ್ರಿಯ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ಮರಣ ಹೊಂದಿದ್ದು, ಚಲನಚಿತ್ರ ರಂಗಕ್ಕೆ ಮಾತ್ರವಲ್ಲ ರಾಘವೇಂದ್ರ ಸ್ವಾಮಿಗಳ ಭಕ್ತ ಸಮುದಾಯಕ್ಕೂ ಅಪಾರವಾದ ಹಾನಿಯಾಗಿದೆ. ಅವರ ಕುಟುಂಬದ ಸದಸ್ಯರೆಲ್ಲರೂ ನಿರಂತರವಾಗಿ ರಾಯರಲ್ಲಿ ಭಕ್ತಿ ಹೊಂದಿದೆ. ರಾಯರ ಕುರಿತು ಮಂತ್ರಾಲಯದಲ್ಲಿ ಭಕ್ತಿಭಾವುಕರಾಗಿ ಪುನೀತ್ ರಾಜಕುಮಾರ್ ಭಕ್ತಿಗೀತೆ ಹಾಡಿದ್ದರು ಎಂಬುದನ್ನು ಸ್ಮರಿಸಿಕೊಳ್ಳುತ್ತೇನೆ. ಅಂತಹ ವ್ಯಕ್ತಿ ಈಗ ಇಲ್ಲ ಎನ್ನುವುದು ತುಂಬಾ ನೋವಿನ ಸಂಗತಿ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
-