‘ನಿಮ್ಮ ಸಹಮತವಿದ್ದರೆ ನಿಮ್ಮ ಹೆಸರು ಸೇರಿಸಿ ದಯವಿಟ್ಟು ಶೇರ್ ಮಾಡಿ, ಹೆಚ್ಚು ಜನರಿಗೆ ತಲುಪಿಸಿ. ನಮ್ಮ ಸಣ್ಣ ಸಿನಿಕತೆಗಳನ್ನು ಸದ್ಯಕ್ಕೆ ಮರೆತು ಬಿಡೋಣ...’ ಎನ್ನುವ ಒಕ್ಕಣೆಯೊಂದಿಗೆ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಆರಂಭಿಸಿದ ಅಭಿಯಾನಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಚಿತ್ರ ನಿರ್ದೇಶಕ ಬಿ. ಸುರೇಶ, ಬೊಳುವಾರು ಮಹಮದ್ ಕುಂಞಿ, ಡಾ.ವಿಜಯಾ, ಚೇತನಾ ತೀರ್ಥಹಳ್ಳಿ, ಸಂಧ್ಯಾರಾಣಿ, ಉಷಾ ಪಿ. ರೈ ಸೇರಿದಂತೆ ನೂರಕ್ಕೂ ಹೆಚ್ಚು ಜನರು ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ