ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಅವರ ಬಿಡಿಎ ನಿವೇಶನವನ್ನು ಕಬಳಿಸಲಾಗಿದ್ದು, ಈ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಿವೇಶನ ಕಬಳಿಕೆ ಸಂಬಂಧ ಶಾಸಕ ಗೂಳಿಹಟ್ಟಿ ಶೇಖರ್ ಅವರು ದೂರು ನೀಡಿದ್ದಾರೆ. ರಾಮಮೂರ್ತಿ ಅಲಿಯಾಸ್ ಮಣಿವಣ್ಣನ್, ಅನುರಾಧಾ, ದೀಪಿಕಾ ಸೇರಿ 8 ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಗೂಳಿಹಟ್ಟಿ ಅವರಿಗೆ 2015ರಲ್ಲಿ ಆರ್.ಎಂ.ವಿ 2ನೇ ಹಂತದಲ್ಲಿ 50x80 ಚದರ ಅಡಿ ಅಳತೆಯ ನಿವೇಶನ ಮಂಜೂರಾಗಿತ್ತು. ಇದೇ ನಿವೇಶನ ಹೆಸರಿನಲ್ಲಿ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿದ್ದಾರೆ’ ಎಂದು ತಿಳಿಸಿವೆ.