<p><strong>ಹುಣಸಗಿ (ಯಾದಗಿರಿ ಜಿಲ್ಲೆ):</strong> ತಾಲ್ಲೂಕಿನ ಐತಿಹಾಸಿಕ, ವಚನ ಸಾಹಿತ್ಯಕ್ಕೆ ಬುನಾದಿ ಆಗಿರುವ 10ನೇ ಶತಮಾನದ ಮುದನೂರು ದಾಸಿಮಯ್ಯ ಅವರ ಕ್ಷೇತ್ರದಲ್ಲೂ ಉತ್ಖನನ ನಡೆಸಿ, ಇಲ್ಲಿನ ಐತಿಹಾಸಿಕ ಪರಂಪರೆಯನ್ನು ತಿಳಿಸುವ ಪ್ರಯತ್ನ ಮಾಡಬೇಕು ಎಂಬ ಕೂಗು ಹೆಚ್ಚಾಗಿದೆ.</p>.<p>ತಾಲ್ಲೂಕು ಕೇಂದ್ರದಿಂದ 18 ಕಿ.ಮೀ ದೂರದಲ್ಲಿರುವ ಮುದನೂರು ಗ್ರಾಮ ಪಂಚಾಯಿತಿ ಕೇಂದ್ರ. ದೇವರದಾಸಿಮಯ್ಯ ನಡೆದಾಡಿದ ಭೂಮಿಯಾಗಿದೆ. ಕಾಯಕದ ಜತೆಗೆ ಬಸವಾದಿ ಶರಣರಿಗಿಂತ ಪೂರ್ವದಲ್ಲೇ ವಚನಸಾಹಿತ್ಯ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ.</p>.<p>‘ಭಕ್ತರು ವಿವಿಧೆಡೆಯಿಂದ ಇಲ್ಲಿಗೆ ಬರುತ್ತಾರೆ. ಇಲ್ಲಿನ ಐತಿಹಾಸಿಕ ಸಂಪತ್ತು, ಶಿಲಾ ಶಾಸನಗಳು ಹಾಗೂ ದೇವಸ್ಥಾನಗಳು ಭೂಗರ್ಭದಲ್ಲಿ ಮುಚ್ಚಿ ಹೋಗಿದೆ. ಉತ್ಖನನ ಮಾಡುವ ಮೂಲಕ ಅವುಗಳ ಕುರಿತು ಬೆಳಕು ಚೆಲ್ಲುವ ಕಾರ್ಯ ಮಾಡಬೇಕು’ ಎನ್ನುತ್ತಾರೆ ಗ್ರಾಮಸ್ಥರು.</p>.<p>2011ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುದನೂರು ಗ್ರಾಮಕ್ಕೆ ಬಂದು ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಅಂದಾಜು ₹6 ಕೋಟಿ ವೆಚ್ಚದಲ್ಲಿ ಮೂಲಸೌಲಭ್ಯ ಕಲ್ಪಿಸಲು ಒತ್ತು ನೀಡಿದ್ದರು. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ತಂಗಲು ಅಂದಾಜು ₹4 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ, ರಾಮತೀರ್ಥ, ಪಾಂಡುತೀರ್ಥ, ಹಾಲು ತೀರ್ಥ, ಸಕ್ಕರೆ ತೀರ್ಥವನ್ನು ಅಭಿವೃದ್ಧಿ ಪಡಿಸಲಾಗಿದೆ. </p>.<p>‘ಗ್ರಾಮದಲ್ಲಿರುವ ದಾಸಿಮಯ್ಯ, ರಾಮನಾಥ ದೇವರ ದೇವಸ್ಥಾನದ ಮೇಲ್ಭಾಗದ ಸುತ್ತಲೂ 200 ಮನೆಗಳಿವೆ. 161 ಮನೆಗಳ ಸ್ಥಳಾಂತರಕ್ಕೆ ಹಿಂದೆ ಗ್ರಾಮದ ಅಣಿ ಮೇಲಿರುವ ಸರ್ಕಾರಿ ಸ್ಥಳ ಸರ್ವೆ ನಂ 239/2ರಲ್ಲಿ 10 ಎಕರೆ ಸ್ಥಳವನ್ನು ಗುರುತಿಸಲಾಗಿದೆ. ಆದರೆ, ಅವುಗಳನ್ನು ನಿವೇಶನಗಳಾಗಿ ಪರಿವರ್ತಿಸಿ ಮನೆಗಳ ಕಟ್ಟಡ ಕೆಲಸ ಆರಂಭಿಸಬೇಕಿದೆ’ ಎನ್ನುತ್ತಾರೆ ಗ್ರಾಮದ ದೇವರ ದಾಸಿಮಯ್ಯ ವಿಚಾರ ವೇದಿಕೆ ಅಧ್ಯಕ್ಷ ಶಾಂತರಡ್ಡಿ ಚೌದ್ರಿ.</p>.<p>‘ಈಗ ಉತ್ಖನನ ನಡೆಸಿದರೆ ಶಿಲಾಶಾಸನಗಳು ಹಾಗೂ ಶಿಲ್ಪಗಳು ಮತ್ತು ಅಂದಿನ ಅನೇಕ ಐತಿಹಾಸಿಕ ಮಹತ್ವದ ವಿಷಗಳು ಹೊರಬರಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಉತ್ಕನನಕ್ಕೆ ಪ್ರಥಮ ಆದ್ಯತೆ ನೀಡಬೇಕು’ ಎಂದು ಗ್ರಾಮದ ಬಸನಗೌಡ ಪಾಟೀಲ, ಕೃಷ್ಣಾರಡ್ಡಿ ಮುದನೂರು, ಚನ್ನಪ್ಪಗೌಡ ಬೇಕಿನಾಳ, ವಿಶ್ವನಾಥರಡ್ಡಿ ಪಡೆಕನೂರ, ಮಲ್ಲನಗೌಡ ನಗನೂರ, ಮೈಹಿಬೂಬ ಹಂದ್ರಾಳ ಒತ್ತಾಯಿಸುತ್ತಾರೆ.</p>.<div><blockquote>ದೇಗುಲದ ಮುಂದಿರುವ ರಾಮತೀರ್ಥ ಪುಷ್ಕರಣಿ ಅಪಾರ ಜಲಸಂಪತ್ತನ್ನು ಹೊಂದಿದೆ. ಎಂತಹ ಬೇಸಿಗೆಯಲ್ಲೂ ಪುಷ್ಕರಣಿಯ ಜಲ ಬತ್ತಿದ ಉದಾಹರಣೆ ಇಲ್ಲ </blockquote><span class="attribution">-ಮಡಿವಾಳಪ್ಪಗೌಡ, ಬಳವಾಟ ಗ್ರಾಮದ ಹಿರಿಯರು</span></div>.<div><blockquote>ಮುದನೂರು ಗ್ರಾಮದಲ್ಲಿ ಮನೆಗಳ ಸ್ಥಳಾಂತರಿಸುವ ಬಗ್ಗೆ ಗ್ರಾಮ ಸಭೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಕಳುಹಿಸಿಕೊಡಲಾಗಿದೆ. ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು </blockquote><span class="attribution">-ಎಂ. ಬಸವರಾಜ, ತಹಶೀಲ್ದಾರ್ ಹುಣಸಗಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ (ಯಾದಗಿರಿ ಜಿಲ್ಲೆ):</strong> ತಾಲ್ಲೂಕಿನ ಐತಿಹಾಸಿಕ, ವಚನ ಸಾಹಿತ್ಯಕ್ಕೆ ಬುನಾದಿ ಆಗಿರುವ 10ನೇ ಶತಮಾನದ ಮುದನೂರು ದಾಸಿಮಯ್ಯ ಅವರ ಕ್ಷೇತ್ರದಲ್ಲೂ ಉತ್ಖನನ ನಡೆಸಿ, ಇಲ್ಲಿನ ಐತಿಹಾಸಿಕ ಪರಂಪರೆಯನ್ನು ತಿಳಿಸುವ ಪ್ರಯತ್ನ ಮಾಡಬೇಕು ಎಂಬ ಕೂಗು ಹೆಚ್ಚಾಗಿದೆ.</p>.<p>ತಾಲ್ಲೂಕು ಕೇಂದ್ರದಿಂದ 18 ಕಿ.ಮೀ ದೂರದಲ್ಲಿರುವ ಮುದನೂರು ಗ್ರಾಮ ಪಂಚಾಯಿತಿ ಕೇಂದ್ರ. ದೇವರದಾಸಿಮಯ್ಯ ನಡೆದಾಡಿದ ಭೂಮಿಯಾಗಿದೆ. ಕಾಯಕದ ಜತೆಗೆ ಬಸವಾದಿ ಶರಣರಿಗಿಂತ ಪೂರ್ವದಲ್ಲೇ ವಚನಸಾಹಿತ್ಯ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ.</p>.<p>‘ಭಕ್ತರು ವಿವಿಧೆಡೆಯಿಂದ ಇಲ್ಲಿಗೆ ಬರುತ್ತಾರೆ. ಇಲ್ಲಿನ ಐತಿಹಾಸಿಕ ಸಂಪತ್ತು, ಶಿಲಾ ಶಾಸನಗಳು ಹಾಗೂ ದೇವಸ್ಥಾನಗಳು ಭೂಗರ್ಭದಲ್ಲಿ ಮುಚ್ಚಿ ಹೋಗಿದೆ. ಉತ್ಖನನ ಮಾಡುವ ಮೂಲಕ ಅವುಗಳ ಕುರಿತು ಬೆಳಕು ಚೆಲ್ಲುವ ಕಾರ್ಯ ಮಾಡಬೇಕು’ ಎನ್ನುತ್ತಾರೆ ಗ್ರಾಮಸ್ಥರು.</p>.<p>2011ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುದನೂರು ಗ್ರಾಮಕ್ಕೆ ಬಂದು ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಅಂದಾಜು ₹6 ಕೋಟಿ ವೆಚ್ಚದಲ್ಲಿ ಮೂಲಸೌಲಭ್ಯ ಕಲ್ಪಿಸಲು ಒತ್ತು ನೀಡಿದ್ದರು. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ತಂಗಲು ಅಂದಾಜು ₹4 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ, ರಾಮತೀರ್ಥ, ಪಾಂಡುತೀರ್ಥ, ಹಾಲು ತೀರ್ಥ, ಸಕ್ಕರೆ ತೀರ್ಥವನ್ನು ಅಭಿವೃದ್ಧಿ ಪಡಿಸಲಾಗಿದೆ. </p>.<p>‘ಗ್ರಾಮದಲ್ಲಿರುವ ದಾಸಿಮಯ್ಯ, ರಾಮನಾಥ ದೇವರ ದೇವಸ್ಥಾನದ ಮೇಲ್ಭಾಗದ ಸುತ್ತಲೂ 200 ಮನೆಗಳಿವೆ. 161 ಮನೆಗಳ ಸ್ಥಳಾಂತರಕ್ಕೆ ಹಿಂದೆ ಗ್ರಾಮದ ಅಣಿ ಮೇಲಿರುವ ಸರ್ಕಾರಿ ಸ್ಥಳ ಸರ್ವೆ ನಂ 239/2ರಲ್ಲಿ 10 ಎಕರೆ ಸ್ಥಳವನ್ನು ಗುರುತಿಸಲಾಗಿದೆ. ಆದರೆ, ಅವುಗಳನ್ನು ನಿವೇಶನಗಳಾಗಿ ಪರಿವರ್ತಿಸಿ ಮನೆಗಳ ಕಟ್ಟಡ ಕೆಲಸ ಆರಂಭಿಸಬೇಕಿದೆ’ ಎನ್ನುತ್ತಾರೆ ಗ್ರಾಮದ ದೇವರ ದಾಸಿಮಯ್ಯ ವಿಚಾರ ವೇದಿಕೆ ಅಧ್ಯಕ್ಷ ಶಾಂತರಡ್ಡಿ ಚೌದ್ರಿ.</p>.<p>‘ಈಗ ಉತ್ಖನನ ನಡೆಸಿದರೆ ಶಿಲಾಶಾಸನಗಳು ಹಾಗೂ ಶಿಲ್ಪಗಳು ಮತ್ತು ಅಂದಿನ ಅನೇಕ ಐತಿಹಾಸಿಕ ಮಹತ್ವದ ವಿಷಗಳು ಹೊರಬರಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಉತ್ಕನನಕ್ಕೆ ಪ್ರಥಮ ಆದ್ಯತೆ ನೀಡಬೇಕು’ ಎಂದು ಗ್ರಾಮದ ಬಸನಗೌಡ ಪಾಟೀಲ, ಕೃಷ್ಣಾರಡ್ಡಿ ಮುದನೂರು, ಚನ್ನಪ್ಪಗೌಡ ಬೇಕಿನಾಳ, ವಿಶ್ವನಾಥರಡ್ಡಿ ಪಡೆಕನೂರ, ಮಲ್ಲನಗೌಡ ನಗನೂರ, ಮೈಹಿಬೂಬ ಹಂದ್ರಾಳ ಒತ್ತಾಯಿಸುತ್ತಾರೆ.</p>.<div><blockquote>ದೇಗುಲದ ಮುಂದಿರುವ ರಾಮತೀರ್ಥ ಪುಷ್ಕರಣಿ ಅಪಾರ ಜಲಸಂಪತ್ತನ್ನು ಹೊಂದಿದೆ. ಎಂತಹ ಬೇಸಿಗೆಯಲ್ಲೂ ಪುಷ್ಕರಣಿಯ ಜಲ ಬತ್ತಿದ ಉದಾಹರಣೆ ಇಲ್ಲ </blockquote><span class="attribution">-ಮಡಿವಾಳಪ್ಪಗೌಡ, ಬಳವಾಟ ಗ್ರಾಮದ ಹಿರಿಯರು</span></div>.<div><blockquote>ಮುದನೂರು ಗ್ರಾಮದಲ್ಲಿ ಮನೆಗಳ ಸ್ಥಳಾಂತರಿಸುವ ಬಗ್ಗೆ ಗ್ರಾಮ ಸಭೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಕಳುಹಿಸಿಕೊಡಲಾಗಿದೆ. ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು </blockquote><span class="attribution">-ಎಂ. ಬಸವರಾಜ, ತಹಶೀಲ್ದಾರ್ ಹುಣಸಗಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>