<p><strong>ಮುಧೋಳ (ಬಾಗಲಕೋಟೆ): </strong>ಮುಧೋಳ ಹೌಂಡ್‘ ತಳಿಯ ನಾಯಿಯ ನಾಲ್ಕು ಮರಿಗಳನ್ನು ವಾಯುಪಡೆಯ ದೆಹಲಿ ಕೇಂದ್ರದ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶುಕ್ರವಾರ ಇಲ್ಲಿನತಾಲ್ಲೂಕಿನ ತಿಮ್ಮಾಪುರ ಗ್ರಾಮ ವ್ಯಾಪ್ತಿಯ ಶ್ವಾನ ಸಂಶೋಧನಾ ಕೇಂದ್ರದಲ್ಲಿ ಹಸ್ತಾಂತರಿಸಿದರು.</p>.<p>ಬಳಿಕ ಮಾತನಾಡಿದ ಅವರು, ಮುಧೋಳದ ಘೋರ್ಪಡೆ ಮಹಾರಾಜರು ಸಂರಕ್ಷಿಸಿದ್ದ ‘ಮುಧೋಳದ ಹೌಂಡ್’ ತಳಿಗೆ ಅಪಾರ ಬೇಡಿಕೆಯಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಬೇಕಾಗಿದೆ ಎಂದು ಹೇಳಿದರು.</p>.<p>ಭಾರತೀಯ ಸೇನೆ, ಪೊಲೀಸ್ ಇಲಾಖೆ, ಇಂಡೋ ಟಿಬೆಟ್ ಗಡಿ ಭದ್ರತಾ ಪಡೆಯಲ್ಲಿ ಇವುಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ. ಈಗ ವಾಯುಪಡೆ ಸೇರಿದೆ. ಮುಂದೆ ನೌಕಾಪಡೆಗೂ ಕಳುಹಿಸಲಾಗುವುದು.ಪ್ರಧಾನಿ ನರೇಂದ್ರ ಮೋದಿ ಈ ತಳಿ ಕುರಿತು ‘ಮನ್ ಕಿ ಬಾತ್’ನಲ್ಲಿ ಉಲ್ಲೇಖಿಸಿದ್ದರು ಎಂದರು.</p>.<p>ಬೀದರ್ ಪಶುವೈದ್ಯಕೀಯ ವಿಶ್ವವಿದ್ಯಾಲಯ ಈ ಶ್ವಾನದ ಸಂಶೋಧನಾ ಕೇಂದ್ರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿಲ್ಲ. ಇದಕ್ಕಾಗಿ ಶೀಘ್ರ ಸಭೆ ನಡೆಸಲಾಗುವುದು. ವಿಶ್ವವಿದ್ಯಾಲಯ ಬಿಟ್ಟು ಸ್ವತಂತ್ರವಾಗಿ ಸರ್ಕಾರದಿಂದಲೇ ತಳಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆದಿದೆ ಎಂದು ವಿವರಿಸಿದರು.</p>.<p>40 ಎಕರೆ ವಿಸ್ತೀರ್ಣದ ಈ ಕೇಂದ್ರದಲ್ಲಿ ವರ್ಷ ಪೂರ್ತಿ ಸಂಶೋಧನೆ, ತಳಿ ಅಭಿವೃದ್ಧಿ, ಪಾಲನೆ ಪೋಷಣೆ ಕುರಿತು ಚಟುವಟಿಕೆಗಳು ನಡೆಯಬೇಕು. ವಿ.ವಿ ಸಹಕರಿಸದ್ದರೆ, ಸರ್ಕಾರವೇ ಈ ಕೆಲಸ ಮಾಡಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಧೋಳ (ಬಾಗಲಕೋಟೆ): </strong>ಮುಧೋಳ ಹೌಂಡ್‘ ತಳಿಯ ನಾಯಿಯ ನಾಲ್ಕು ಮರಿಗಳನ್ನು ವಾಯುಪಡೆಯ ದೆಹಲಿ ಕೇಂದ್ರದ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶುಕ್ರವಾರ ಇಲ್ಲಿನತಾಲ್ಲೂಕಿನ ತಿಮ್ಮಾಪುರ ಗ್ರಾಮ ವ್ಯಾಪ್ತಿಯ ಶ್ವಾನ ಸಂಶೋಧನಾ ಕೇಂದ್ರದಲ್ಲಿ ಹಸ್ತಾಂತರಿಸಿದರು.</p>.<p>ಬಳಿಕ ಮಾತನಾಡಿದ ಅವರು, ಮುಧೋಳದ ಘೋರ್ಪಡೆ ಮಹಾರಾಜರು ಸಂರಕ್ಷಿಸಿದ್ದ ‘ಮುಧೋಳದ ಹೌಂಡ್’ ತಳಿಗೆ ಅಪಾರ ಬೇಡಿಕೆಯಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಬೇಕಾಗಿದೆ ಎಂದು ಹೇಳಿದರು.</p>.<p>ಭಾರತೀಯ ಸೇನೆ, ಪೊಲೀಸ್ ಇಲಾಖೆ, ಇಂಡೋ ಟಿಬೆಟ್ ಗಡಿ ಭದ್ರತಾ ಪಡೆಯಲ್ಲಿ ಇವುಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ. ಈಗ ವಾಯುಪಡೆ ಸೇರಿದೆ. ಮುಂದೆ ನೌಕಾಪಡೆಗೂ ಕಳುಹಿಸಲಾಗುವುದು.ಪ್ರಧಾನಿ ನರೇಂದ್ರ ಮೋದಿ ಈ ತಳಿ ಕುರಿತು ‘ಮನ್ ಕಿ ಬಾತ್’ನಲ್ಲಿ ಉಲ್ಲೇಖಿಸಿದ್ದರು ಎಂದರು.</p>.<p>ಬೀದರ್ ಪಶುವೈದ್ಯಕೀಯ ವಿಶ್ವವಿದ್ಯಾಲಯ ಈ ಶ್ವಾನದ ಸಂಶೋಧನಾ ಕೇಂದ್ರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿಲ್ಲ. ಇದಕ್ಕಾಗಿ ಶೀಘ್ರ ಸಭೆ ನಡೆಸಲಾಗುವುದು. ವಿಶ್ವವಿದ್ಯಾಲಯ ಬಿಟ್ಟು ಸ್ವತಂತ್ರವಾಗಿ ಸರ್ಕಾರದಿಂದಲೇ ತಳಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆದಿದೆ ಎಂದು ವಿವರಿಸಿದರು.</p>.<p>40 ಎಕರೆ ವಿಸ್ತೀರ್ಣದ ಈ ಕೇಂದ್ರದಲ್ಲಿ ವರ್ಷ ಪೂರ್ತಿ ಸಂಶೋಧನೆ, ತಳಿ ಅಭಿವೃದ್ಧಿ, ಪಾಲನೆ ಪೋಷಣೆ ಕುರಿತು ಚಟುವಟಿಕೆಗಳು ನಡೆಯಬೇಕು. ವಿ.ವಿ ಸಹಕರಿಸದ್ದರೆ, ಸರ್ಕಾರವೇ ಈ ಕೆಲಸ ಮಾಡಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>