ಬಾಗಲಕೋಟೆ ಜಿಲ್ಲೆ ಮಾತ್ರವಲ್ಲದೆ, ಇಡೀ ರಾಜ್ಯಕ್ಕೆ ಹೆಸರು ತಂದುಕೊಟ್ಟ ಶ್ವಾನಗಳ ತಳಿ ಮುಧೋಳ್ ಹೌಂಡ್. ನರೇಂದ್ರ ಮೋದಿಯವರ ಭದ್ರತಾ ತಂಡದಲ್ಲಿ ಸ್ಥಾನ ಪಡೆದಿರುವ ಮುಧೋಳ್ ಶ್ವಾನಗಳು, ಬಾಗಲಕೋಟೆ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯದವರೂ ಸೇರಿದಂತೆ ವಿವಿಧ ಸಮುದಾಯಕ್ಕೆ ಸೇರಿದ ಬ್ರೀಡರ್ಗಳ ಬದುಕನ್ನೇ ಬದಲಾಯಿಸಿವೆ. ಸಾಮಾಜಿಕವಾಗಿ, ಆರ್ಥಿಕವಾಗಿ ಜಿಲ್ಲೆಯ ಚಿತ್ರಣವನ್ನೂ ಬದಲಿಸಿರುವ ಮುಧೋಳ್ ಶ್ವಾನಗಳ ಸಂಪೂರ್ಣ ಮಾಹಿತಿ ಈ ವಿಡಿಯೊದಲ್ಲಿ.