<p><strong>ತುಮಕೂರು:</strong> ‘ಕಳಪೆ ಕಾಮಗಾರಿಯ ಸಿ.ಸಿ. ರಸ್ತೆಯಿಂದಾಗಿ ಮೈ ಮತ್ತು ಮನೆಗಳಿಗೆ ದೂಳಿನ ಮಜ್ಜನ ಆಗುತ್ತಿದೆ’ ಎಂಬ ಆರೋಪದಿಂದ ಎಚ್ಚೆತ್ತುಕೊಂಡಿರುವ ಗುತ್ತಿಗೆದಾರರೊಬ್ಬರು ರಸ್ತೆಗೆ ಟ್ಯಾಂಕರ್ಗಟ್ಟಲೇ ನೀರು ಸುರಿಸಿ, ತೊಳೆದರು. ಆಗಲೂ ದೂಳು ನಿಲ್ಲಲಿಲ್ಲ. ಈಗ ಆ ರಸ್ತೆಯ ಮೇಲೆ ಮತ್ತೊಂದು ಪದರವನ್ನು(ಸರ್ಫೆಸ್ ಟ್ರೀಟ್ಮೆಂಟ್) ಹಾಸುತ್ತಿದ್ದಾರೆ.</p>.<p>ಎಸ್.ಎಸ್.ಪುರದ 8ನೇ ಅಡ್ಡರಸ್ತೆಯ 1ನೇ ಮುಖ್ಯರಸ್ತೆಯನ್ನು ಕಳೆದ ಡಿಸೆಂಬರ್ನಲ್ಲಿಯೇ ಅಭಿವೃದ್ಧಿಪಡಿಸಲಾಗಿತ್ತು. ಆ ಕೆಲಸವನ್ನು ತೋಂಟದ ಆರಾಧ್ಯ ಎಂಬುವರು ಗುತ್ತಿಗೆ ಪಡೆದಿದ್ದರು. ರಸ್ತೆ ಕಾಮಗಾರಿ ‘ಕಳಪೆ’ಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು.</p>.<p>ಸ್ಥಳೀಯ ನಿವಾಸಿಗಳ ಮಾತಿಗೆ ಸಾಕ್ಷಿ ಎಂಬಂತೆ ಒಂದೂವರೆ ತಿಂಗಳ ಹಿಂದೆಯಷ್ಟೆ ನಿರ್ಮಾಣಗೊಂಡ ಈ ರಸ್ತೆಯಲ್ಲಿ ಜಲ್ಲಿ ಕಲ್ಲುಗಳನ್ನು ಎದ್ದು ಕಾಣುತ್ತಿದ್ದವು. ಅದರ ಮೇಲಿರಬೇಕಾದ ಸಿಮೆಂಟ್ ಮತ್ತು ಎಂ.ಸ್ಯಾಂಡ್ನ ಮಿಶ್ರಣದ ಪದರ ಮಾಯವಾಗಿದೆ.</p>.<p>ಸಿಮೆಂಟ್ ಮತ್ತು ಜಲ್ಲಿಗಿಂತ ಎಂ.ಸ್ಯಾಂಡ್(ಕಲ್ಲಿನ ಮರಳು)ಅನ್ನೆ ಕಾಮಗಾರಿಗೆ ಹೆಚ್ಚು ಬಳಸಿದ್ದಾರೆ. ವಾಹನಗಳು ಓಡಾಡಿದಾಗ ಇಲ್ಲಿ ದೂಳು ಹೆಚ್ಚು ಏಳುತ್ತದೆ. ಅದರಿಂದ ಆರೋಗ್ಯ ಕೆಡುತ್ತಿದೆ. ಕೆಮ್ಮು–ನೆಗಡಿ ಬರುತ್ತಿದೆ ಎಂದು ಸ್ಥಳೀಯರಾದ ಎಚ್.ಸುಗುಣ ದೂರಿದ್ದರು.</p>.<p>ರಸ್ತೆಯೆನೋ ಸಮತಟ್ಟಾಗಿ ಮಾಡಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಸಿಮೆಂಟ್, ಜಲ್ಲಿ, ಮರಳು ಮಿಶ್ರಣ ಮಾಡಿಲ್ಲ. ರಸ್ತೆ ಒಣಗಿದಾಗ ಹೊಗೆಯ ರೀತಿಯಲ್ಲಿ ದೂಳು ಏಳುತ್ತದೆ. ಈ ಬಗ್ಗೆ ದೂರಿದರೆ, ಅವರು ಮತ್ತೊಂದು ಬಜೆಟ್ನಲ್ಲಿ ಮತ್ತೊಮ್ಮೆ ರಸ್ತೆ ಮಾಡುತ್ತಾರೆ. ಅದರಿಂದ ನಮ್ಮ ಹಣವೇ ಪೋಲಾಗುತ್ತದೆ ಅಲ್ಲವೆ ಎಂದು ದೋಬಿಘಾಟ್ನ ನಿವಾಸಿ ಎಂ.ಎಚ್.ಚೇತನಾ ಪ್ರಶ್ನಿಸಿದರು.</p>.<p><strong>‘ಕ್ಯೂರಿಂಗ್ ಮುನ್ನ ಸಂಚಾರ: ರಸ್ತೆಗೆ ಹಾನಿ’</strong></p>.<p>ನೀರು ಸಿಂಪಡಿಸಿ ರಸ್ತೆಯನ್ನು ಗಟ್ಟಿಮುಟ್ಟು ಮಾಡುವ (ಕ್ಯೂರಿಂಗ್) ಮುನ್ನವೇ ಸಾರ್ವಜನಿಕರು ಈ ರಸ್ತೆಯಲ್ಲಿ ವಾಹನಗಳನ್ನು ಓಡಿಸಲು ಶುರು ಮಾಡಿದರು. ಇದರಿಂದ ರಸ್ತೆಯ ಸ್ವಲ್ಪ ಕಡೆ ಮಾತ್ರ ಜಲ್ಲಿಗಳು ಕಾಣುತ್ತಿದ್ದವು ಎಂದು ತುಮಕೂರು ನಗರ ಪಾಲಿಕೆಯ ಸ್ಥಳೀಯ ಸದಸ್ಯೆ (25ನೇ ವಾರ್ಡ್) ಮಂಜುಳಾ ಆದರ್ಶ ಅವರು ಹೇಳಿದರು.</p>.<p>ದೂಳಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಲು ನೀರು ಹಾಕಿಸಲಾಗುತ್ತಿತ್ತು ಎಂದು ಅವರು ತಿಳಿಸಿದರು.</p>.<p>‘ಜನವರಿ 19 ಮತ್ತು 20ರಂದು ರಸ್ತೆಯಲ್ಲಿನ ಎಂ.ಸ್ಯಾಂಡ್ನಿಂದ ಏಳುತ್ತಿದ್ದ ದೂಳನ್ನು ವೈಜ್ಞಾನಿಕವಾಗಿ ತೆಗೆದಿದ್ದೇವೆ. ರಸ್ತೆಯನ್ನು ಮತ್ತಷ್ಟು ಗಟ್ಟಿಮುಟ್ಟುಮಾಡಲು ರಾಸಾಯನಿಕಗಳ ಮಿಶ್ರಿತ ಚುರುಕಿ ಹಾಕುತ್ತಿದ್ದೇವೆ. ಈ ಮರು ಕಾಮಗಾರಿಗೆ ಅಂದಾಜು ₹1.5 ಲಕ್ಷ ತಗುಲಬಹುದು. ಇದನ್ನು ಗುತ್ತಿಗೆದಾರರೇ ಭರಿಸಲಿದ್ದಾರೆ’ ಎಂದು ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ದೂಳಿನಿಂದ ಡಸ್ಟ್ ಅಲರ್ಜಿ ಆಗುತ್ತಿದೆ. ಈ ಬಗ್ಗೆ ಪಾಲಿಕೆಯ ಸ್ಥಳೀಯ ಸದಸ್ಯರಿಗೆ ಎಷ್ಟು ಬಾರಿ ಹೇಳಿದರೂ ಸಮಸ್ಯೆ ಪರಿಹಾರ ಆಗಿರಲಿಲ್ಲ. ಈಗ ಏನೋ ಮಾಡುತ್ತಿದ್ದಾರೆ.</p>.<p><strong>ಚಂದ್ರಕಲಾ, ಸ್ಥಳೀಯರು</strong></p>.<p>ದೂಳಿನಿಂದಾಗಿ ಬಹುತೇಕ ಮನೆಗಳ ಕಿಟಕಿ–ಬಾಗಿಲುಗಳು ಸದಾ ಮುಚ್ಚಿರುತ್ತವೆ. ಸ್ವಲ್ಪ ಬಾಗಿಲು ತೆರೆದರು ದೂಳು ಮನೆ ಸೇರುತ್ತಿತ್ತು.</p>.<p><strong>ಜಿ.ವೈ.ನಟರಾಜ್ , ಸ್ಥಳೀಯರು</strong></p>.<p><strong>ಅಂಕಿ–ಅಂಶ</strong></p>.<p>200 ಮೀಟರ್ರಸ್ತೆಯ ಉದ್ದ</p>.<p>4.5 ಮೀಟರ್ -ರಸ್ತೆಯ ಅಗಲ</p>.<p>100 ಮಿಲಿಮೀಟರ್ -ರಸ್ತೆಯಲ್ಲಿ ಹಾಕಿದ್ದ ಕಾಂಕ್ರೀಟ್ ಪದರದ ದಪ್ಪ</p>.<p>₹4.33 ಲಕ್ಷ -ರಸ್ತೆ ನಿರ್ಮಾಣದ ವೆಚ್ಚ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ‘ಕಳಪೆ ಕಾಮಗಾರಿಯ ಸಿ.ಸಿ. ರಸ್ತೆಯಿಂದಾಗಿ ಮೈ ಮತ್ತು ಮನೆಗಳಿಗೆ ದೂಳಿನ ಮಜ್ಜನ ಆಗುತ್ತಿದೆ’ ಎಂಬ ಆರೋಪದಿಂದ ಎಚ್ಚೆತ್ತುಕೊಂಡಿರುವ ಗುತ್ತಿಗೆದಾರರೊಬ್ಬರು ರಸ್ತೆಗೆ ಟ್ಯಾಂಕರ್ಗಟ್ಟಲೇ ನೀರು ಸುರಿಸಿ, ತೊಳೆದರು. ಆಗಲೂ ದೂಳು ನಿಲ್ಲಲಿಲ್ಲ. ಈಗ ಆ ರಸ್ತೆಯ ಮೇಲೆ ಮತ್ತೊಂದು ಪದರವನ್ನು(ಸರ್ಫೆಸ್ ಟ್ರೀಟ್ಮೆಂಟ್) ಹಾಸುತ್ತಿದ್ದಾರೆ.</p>.<p>ಎಸ್.ಎಸ್.ಪುರದ 8ನೇ ಅಡ್ಡರಸ್ತೆಯ 1ನೇ ಮುಖ್ಯರಸ್ತೆಯನ್ನು ಕಳೆದ ಡಿಸೆಂಬರ್ನಲ್ಲಿಯೇ ಅಭಿವೃದ್ಧಿಪಡಿಸಲಾಗಿತ್ತು. ಆ ಕೆಲಸವನ್ನು ತೋಂಟದ ಆರಾಧ್ಯ ಎಂಬುವರು ಗುತ್ತಿಗೆ ಪಡೆದಿದ್ದರು. ರಸ್ತೆ ಕಾಮಗಾರಿ ‘ಕಳಪೆ’ಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು.</p>.<p>ಸ್ಥಳೀಯ ನಿವಾಸಿಗಳ ಮಾತಿಗೆ ಸಾಕ್ಷಿ ಎಂಬಂತೆ ಒಂದೂವರೆ ತಿಂಗಳ ಹಿಂದೆಯಷ್ಟೆ ನಿರ್ಮಾಣಗೊಂಡ ಈ ರಸ್ತೆಯಲ್ಲಿ ಜಲ್ಲಿ ಕಲ್ಲುಗಳನ್ನು ಎದ್ದು ಕಾಣುತ್ತಿದ್ದವು. ಅದರ ಮೇಲಿರಬೇಕಾದ ಸಿಮೆಂಟ್ ಮತ್ತು ಎಂ.ಸ್ಯಾಂಡ್ನ ಮಿಶ್ರಣದ ಪದರ ಮಾಯವಾಗಿದೆ.</p>.<p>ಸಿಮೆಂಟ್ ಮತ್ತು ಜಲ್ಲಿಗಿಂತ ಎಂ.ಸ್ಯಾಂಡ್(ಕಲ್ಲಿನ ಮರಳು)ಅನ್ನೆ ಕಾಮಗಾರಿಗೆ ಹೆಚ್ಚು ಬಳಸಿದ್ದಾರೆ. ವಾಹನಗಳು ಓಡಾಡಿದಾಗ ಇಲ್ಲಿ ದೂಳು ಹೆಚ್ಚು ಏಳುತ್ತದೆ. ಅದರಿಂದ ಆರೋಗ್ಯ ಕೆಡುತ್ತಿದೆ. ಕೆಮ್ಮು–ನೆಗಡಿ ಬರುತ್ತಿದೆ ಎಂದು ಸ್ಥಳೀಯರಾದ ಎಚ್.ಸುಗುಣ ದೂರಿದ್ದರು.</p>.<p>ರಸ್ತೆಯೆನೋ ಸಮತಟ್ಟಾಗಿ ಮಾಡಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಸಿಮೆಂಟ್, ಜಲ್ಲಿ, ಮರಳು ಮಿಶ್ರಣ ಮಾಡಿಲ್ಲ. ರಸ್ತೆ ಒಣಗಿದಾಗ ಹೊಗೆಯ ರೀತಿಯಲ್ಲಿ ದೂಳು ಏಳುತ್ತದೆ. ಈ ಬಗ್ಗೆ ದೂರಿದರೆ, ಅವರು ಮತ್ತೊಂದು ಬಜೆಟ್ನಲ್ಲಿ ಮತ್ತೊಮ್ಮೆ ರಸ್ತೆ ಮಾಡುತ್ತಾರೆ. ಅದರಿಂದ ನಮ್ಮ ಹಣವೇ ಪೋಲಾಗುತ್ತದೆ ಅಲ್ಲವೆ ಎಂದು ದೋಬಿಘಾಟ್ನ ನಿವಾಸಿ ಎಂ.ಎಚ್.ಚೇತನಾ ಪ್ರಶ್ನಿಸಿದರು.</p>.<p><strong>‘ಕ್ಯೂರಿಂಗ್ ಮುನ್ನ ಸಂಚಾರ: ರಸ್ತೆಗೆ ಹಾನಿ’</strong></p>.<p>ನೀರು ಸಿಂಪಡಿಸಿ ರಸ್ತೆಯನ್ನು ಗಟ್ಟಿಮುಟ್ಟು ಮಾಡುವ (ಕ್ಯೂರಿಂಗ್) ಮುನ್ನವೇ ಸಾರ್ವಜನಿಕರು ಈ ರಸ್ತೆಯಲ್ಲಿ ವಾಹನಗಳನ್ನು ಓಡಿಸಲು ಶುರು ಮಾಡಿದರು. ಇದರಿಂದ ರಸ್ತೆಯ ಸ್ವಲ್ಪ ಕಡೆ ಮಾತ್ರ ಜಲ್ಲಿಗಳು ಕಾಣುತ್ತಿದ್ದವು ಎಂದು ತುಮಕೂರು ನಗರ ಪಾಲಿಕೆಯ ಸ್ಥಳೀಯ ಸದಸ್ಯೆ (25ನೇ ವಾರ್ಡ್) ಮಂಜುಳಾ ಆದರ್ಶ ಅವರು ಹೇಳಿದರು.</p>.<p>ದೂಳಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಲು ನೀರು ಹಾಕಿಸಲಾಗುತ್ತಿತ್ತು ಎಂದು ಅವರು ತಿಳಿಸಿದರು.</p>.<p>‘ಜನವರಿ 19 ಮತ್ತು 20ರಂದು ರಸ್ತೆಯಲ್ಲಿನ ಎಂ.ಸ್ಯಾಂಡ್ನಿಂದ ಏಳುತ್ತಿದ್ದ ದೂಳನ್ನು ವೈಜ್ಞಾನಿಕವಾಗಿ ತೆಗೆದಿದ್ದೇವೆ. ರಸ್ತೆಯನ್ನು ಮತ್ತಷ್ಟು ಗಟ್ಟಿಮುಟ್ಟುಮಾಡಲು ರಾಸಾಯನಿಕಗಳ ಮಿಶ್ರಿತ ಚುರುಕಿ ಹಾಕುತ್ತಿದ್ದೇವೆ. ಈ ಮರು ಕಾಮಗಾರಿಗೆ ಅಂದಾಜು ₹1.5 ಲಕ್ಷ ತಗುಲಬಹುದು. ಇದನ್ನು ಗುತ್ತಿಗೆದಾರರೇ ಭರಿಸಲಿದ್ದಾರೆ’ ಎಂದು ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ದೂಳಿನಿಂದ ಡಸ್ಟ್ ಅಲರ್ಜಿ ಆಗುತ್ತಿದೆ. ಈ ಬಗ್ಗೆ ಪಾಲಿಕೆಯ ಸ್ಥಳೀಯ ಸದಸ್ಯರಿಗೆ ಎಷ್ಟು ಬಾರಿ ಹೇಳಿದರೂ ಸಮಸ್ಯೆ ಪರಿಹಾರ ಆಗಿರಲಿಲ್ಲ. ಈಗ ಏನೋ ಮಾಡುತ್ತಿದ್ದಾರೆ.</p>.<p><strong>ಚಂದ್ರಕಲಾ, ಸ್ಥಳೀಯರು</strong></p>.<p>ದೂಳಿನಿಂದಾಗಿ ಬಹುತೇಕ ಮನೆಗಳ ಕಿಟಕಿ–ಬಾಗಿಲುಗಳು ಸದಾ ಮುಚ್ಚಿರುತ್ತವೆ. ಸ್ವಲ್ಪ ಬಾಗಿಲು ತೆರೆದರು ದೂಳು ಮನೆ ಸೇರುತ್ತಿತ್ತು.</p>.<p><strong>ಜಿ.ವೈ.ನಟರಾಜ್ , ಸ್ಥಳೀಯರು</strong></p>.<p><strong>ಅಂಕಿ–ಅಂಶ</strong></p>.<p>200 ಮೀಟರ್ರಸ್ತೆಯ ಉದ್ದ</p>.<p>4.5 ಮೀಟರ್ -ರಸ್ತೆಯ ಅಗಲ</p>.<p>100 ಮಿಲಿಮೀಟರ್ -ರಸ್ತೆಯಲ್ಲಿ ಹಾಕಿದ್ದ ಕಾಂಕ್ರೀಟ್ ಪದರದ ದಪ್ಪ</p>.<p>₹4.33 ಲಕ್ಷ -ರಸ್ತೆ ನಿರ್ಮಾಣದ ವೆಚ್ಚ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>