<p><strong>ವಿಜಯಪುರ: </strong>ಕರ್ನಾಟಕದಲ್ಲಿ ಸದ್ಯ ಇರುವುದು ಬಿಜೆಪಿ ಸರ್ಕಾರವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸರ್ಕಾರವಲ್ಲ. ಇಲ್ಲಿ ಅಪ್ಪ–ಮಕ್ಕಳ ಕುಟುಂಬ ಸರ್ಕಾರ ಇದೆ. ಇದು ಆದಷ್ಟು ಬೇಗ ತೊಲಗಬೇಕು. ರಾಜ್ಯಕ್ಕೆ ಒಳ್ಳೆಯ ಮುಖ್ಯಮಂತ್ರಿ ಬರಬೇಕು ಎಂದುಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 2 ಒಳಗಾಗಿ ಯಡಿಯೂರಪ್ಪನವರನ್ನು ಬದಲಾಯಿಸದಿದ್ದರೆದೊಡ್ಡ ಸ್ಫೋಟ ಆಗಲಿದೆ ಎಂದು ಎಚ್ಚರಿಕೆ ನೀಡಿದರು.</p>.<p class="Subhead"><strong>ಅರುಣ್ ಸಿಂಗ್ ವಿರುದ್ಧ ಗುಡುಗು</strong></p>.<p>ಅರುಣ್ ಸಿಂಗ್ ಅವರಿಗೆ ರಾಜ್ಯ ಉಸ್ತುವಾರಿ ನೀಡಲಾಗಿದೆಯೇ ಹೊರತು, ಯಡಿಯೂರಪ್ಪನವರಿಗೆ, ಅವರ ಮಗನಿಗೆ ಶಹಾಬಾಷ್ ಗಿರಿ ಕೊಡಲು ಅಲ್ಲ? ನೀವು ಬಿಜೆಪಿ ಪರವಾಗಿದ್ದೀರೋ ಅಥವಾ ಯಡಿಯೂರಪ್ಪನವರ ಪರವಾಗಿದ್ದರೊ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಅರುಣ್ ಸಿಂಗ್ ಅವರನ್ನು ಎಂದು ಪ್ರಶ್ನಿಸಿದರು.</p>.<p>‘ಯಾವ ಸಚಿವರಿಗೂ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಬಿಡುತ್ತಿಲ್ಲ. ಅಪ್ಪ–ಮಗ ನೇರವಾಗಿ ಎಲ್ಲ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಾಗಾದರೆಸಚಿವ ಸಂಪುಟ ಏಕೆ ಬೇಕು? ಸಚಿವರು ಏಕೆ ಬೇಕು?ಎಲ್ಲ ಇಲಾಖೆಗಳನ್ನು ಸೇರಿಸಿ ವಿಜಯೇಂದ್ರ ಒಬ್ಬನನ್ನೇ ಸಚಿವನನ್ನಾಗಿ ಮಾಡಲಿ. ಮುಖ್ಯಮಂತ್ರಿನೂ ಆತನೇ ಆಗಲಿ’ ಎಂದು ಹೇಳಿದರು.</p>.<p class="Subhead"><strong>ಸಿಎಂಗೆ ₹ 200 ಕೋಟಿ ಮೊತ್ತದ ಮನೆ ಗಿಫ್ಟ್</strong></p>.<p>‘ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅವರ ಬೀಗ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮರಿಸ್ವಾಮಿ ₹200 ಕೋಟಿ ಮೊತ್ತದ ಮನೆಯನ್ನು ಗಿಫ್ಟ್ ನೀಡಿದ್ದಾರೆ’ ಎಂದು ಆರೋಪಿಸಿದರು.</p>.<p class="Subhead"><strong>ಆಸೆ ಹುಟ್ಟಿಸಿದ್ದಾರೆ</strong></p>.<p>‘ನನ್ನ ನಂತರ ನೀವೇ ಮುಖ್ಯಮಂತ್ರಿ ಎಂದು ನಾಲ್ಕೈದು ಜನಕ್ಕೆ ಆಸೆ ಹುಟ್ಟಿಸಿದ್ದಾರೆ. ಹೀಗಾಗಿ ಅವರು ಯಡಿಯೂರಪ್ಪನವರನ್ನ ತಂದೆ, ತಾಯಿ ಎಂದು ಹೇಳಿಕೊಂಡು ಅವರ ಹಿಂದೆ ಅಡ್ಡಾಡತೊಡಗಿದ್ದಾರೆ. ಈ ನಾಲ್ಕು ಮಂದಿಗಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಬಲಿಕೊಡಲು ಆಗುವುದಿಲ್ಲ’ ಎಂದರು.</p>.<p>‘ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ. ಬದಲಿಗೆಯಡಿಯೂರಪ್ಪ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ವಿಜಯೇಂದ್ರ ನೇತೃತ್ವದ ಸರ್ಕಾರ ರಾಜ್ಯದಲ್ಲಿದೆ. ಇವರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಸಿಡಿ ಪ್ರಕರಣದ ಹೆಸರಲ್ಲಿ ಸದನ ನಡೆಯದಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಕರ್ನಾಟಕದಲ್ಲಿ ಸದ್ಯ ಇರುವುದು ಬಿಜೆಪಿ ಸರ್ಕಾರವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸರ್ಕಾರವಲ್ಲ. ಇಲ್ಲಿ ಅಪ್ಪ–ಮಕ್ಕಳ ಕುಟುಂಬ ಸರ್ಕಾರ ಇದೆ. ಇದು ಆದಷ್ಟು ಬೇಗ ತೊಲಗಬೇಕು. ರಾಜ್ಯಕ್ಕೆ ಒಳ್ಳೆಯ ಮುಖ್ಯಮಂತ್ರಿ ಬರಬೇಕು ಎಂದುಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 2 ಒಳಗಾಗಿ ಯಡಿಯೂರಪ್ಪನವರನ್ನು ಬದಲಾಯಿಸದಿದ್ದರೆದೊಡ್ಡ ಸ್ಫೋಟ ಆಗಲಿದೆ ಎಂದು ಎಚ್ಚರಿಕೆ ನೀಡಿದರು.</p>.<p class="Subhead"><strong>ಅರುಣ್ ಸಿಂಗ್ ವಿರುದ್ಧ ಗುಡುಗು</strong></p>.<p>ಅರುಣ್ ಸಿಂಗ್ ಅವರಿಗೆ ರಾಜ್ಯ ಉಸ್ತುವಾರಿ ನೀಡಲಾಗಿದೆಯೇ ಹೊರತು, ಯಡಿಯೂರಪ್ಪನವರಿಗೆ, ಅವರ ಮಗನಿಗೆ ಶಹಾಬಾಷ್ ಗಿರಿ ಕೊಡಲು ಅಲ್ಲ? ನೀವು ಬಿಜೆಪಿ ಪರವಾಗಿದ್ದೀರೋ ಅಥವಾ ಯಡಿಯೂರಪ್ಪನವರ ಪರವಾಗಿದ್ದರೊ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಅರುಣ್ ಸಿಂಗ್ ಅವರನ್ನು ಎಂದು ಪ್ರಶ್ನಿಸಿದರು.</p>.<p>‘ಯಾವ ಸಚಿವರಿಗೂ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಬಿಡುತ್ತಿಲ್ಲ. ಅಪ್ಪ–ಮಗ ನೇರವಾಗಿ ಎಲ್ಲ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಾಗಾದರೆಸಚಿವ ಸಂಪುಟ ಏಕೆ ಬೇಕು? ಸಚಿವರು ಏಕೆ ಬೇಕು?ಎಲ್ಲ ಇಲಾಖೆಗಳನ್ನು ಸೇರಿಸಿ ವಿಜಯೇಂದ್ರ ಒಬ್ಬನನ್ನೇ ಸಚಿವನನ್ನಾಗಿ ಮಾಡಲಿ. ಮುಖ್ಯಮಂತ್ರಿನೂ ಆತನೇ ಆಗಲಿ’ ಎಂದು ಹೇಳಿದರು.</p>.<p class="Subhead"><strong>ಸಿಎಂಗೆ ₹ 200 ಕೋಟಿ ಮೊತ್ತದ ಮನೆ ಗಿಫ್ಟ್</strong></p>.<p>‘ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅವರ ಬೀಗ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮರಿಸ್ವಾಮಿ ₹200 ಕೋಟಿ ಮೊತ್ತದ ಮನೆಯನ್ನು ಗಿಫ್ಟ್ ನೀಡಿದ್ದಾರೆ’ ಎಂದು ಆರೋಪಿಸಿದರು.</p>.<p class="Subhead"><strong>ಆಸೆ ಹುಟ್ಟಿಸಿದ್ದಾರೆ</strong></p>.<p>‘ನನ್ನ ನಂತರ ನೀವೇ ಮುಖ್ಯಮಂತ್ರಿ ಎಂದು ನಾಲ್ಕೈದು ಜನಕ್ಕೆ ಆಸೆ ಹುಟ್ಟಿಸಿದ್ದಾರೆ. ಹೀಗಾಗಿ ಅವರು ಯಡಿಯೂರಪ್ಪನವರನ್ನ ತಂದೆ, ತಾಯಿ ಎಂದು ಹೇಳಿಕೊಂಡು ಅವರ ಹಿಂದೆ ಅಡ್ಡಾಡತೊಡಗಿದ್ದಾರೆ. ಈ ನಾಲ್ಕು ಮಂದಿಗಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಬಲಿಕೊಡಲು ಆಗುವುದಿಲ್ಲ’ ಎಂದರು.</p>.<p>‘ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ. ಬದಲಿಗೆಯಡಿಯೂರಪ್ಪ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ವಿಜಯೇಂದ್ರ ನೇತೃತ್ವದ ಸರ್ಕಾರ ರಾಜ್ಯದಲ್ಲಿದೆ. ಇವರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಸಿಡಿ ಪ್ರಕರಣದ ಹೆಸರಲ್ಲಿ ಸದನ ನಡೆಯದಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>