ವಿಧಾನ ಪರಿಷತ್ನಲ್ಲಿ ಬಿಜೆಪಿಯ ಮುನಿರಾಜು ಗೌಡ ಪಿ.ಎಂ. ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಅವರು, ‘ಕೋವಿಡ್ನಿಂದ ಮೃತಪಟ್ಟ ರೈತರಲ್ಲಿ 10,437 ಮಂದಿ ವಿವಿಧ ಸಹಕಾರ ಸಂಸ್ಥೆಗಳಿಂದ ₹ 91.97 ಕೋಟಿ ಸಾಲ ಪಡೆದಿದ್ದಾರೆ. ಲಾಭದಲ್ಲಿರುವ ಸಹಕಾರ ಸಂಸ್ಥೆಗಳು ತಮ್ಮ ಲಾಭಾಂಶವನ್ನು ಬಳಸಿಕೊಂಡು, ಅವರ ಸಾಲ ಮನ್ನಾ ಮಾಡಬಹುದು ಎಂಬ ಸೂಚನೆ ನೀಡಲಾಗಿದೆ. ಕೆಲವು ಸಹಕಾರ ಸಂಸ್ಥೆಗಳು ತಮ್ಮ ಆರ್ಥಿಕ ಶಕ್ತಿಗೆ ಅನುಸಾರವಾಗಿ ನಿರ್ಧಾರ ಕೈಗೊಂಡಿವೆ’ ಎಂದರು.